ಅಪರಾಧ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಕರ್ತವ್ಯ ನಿರತ ಪೋಲಿಸ್ ಪೇದೆಗಳಿಗೆ ಊಟ ನೀಡಲು ತೆರಳಿದ್ದ ಪೊಲೀಸ್ ಅಪಘಾತದಲ್ಲಿ ಸಾವು

ಧಾರವಾಡ prajakiran.com : ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರತ ಪೋಲಿಸ್ ಪೇದೆಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡದ ಓಜನ್ ಹೋಟೆಲ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ‌.

ಚುನಾವಣೆಯ ಕೆಲಸದ ಮೇಲೆ ನಿಯೋಜನೆ ಗೊಂಡ ಪೊಲೀಸ್ ಪೇದೆಗಳಿಗೆ ದ್ವಿಚಕ್ರ ವಾಹನದ ಮೇಲೆ ಊಟ ಸರಬರಾಜು ಮಾಡುತ್ತಿದ್ದಾಗ ವೆಂಕಟೇಶ್ವರ ಬೋರವೆಲ್ಸ್ ವಾಹನ ಡಿಕ್ಕಿ ಹೊಡೆದಿದೆ‌.

ಇದರಿಂದಾಗಿ ಸ್ಥಳದಲ್ಲಿಯೇ
ಪೊಲೀಸ್  ಪೇದೆ  ಸಾವನ್ನಪ್ಪಿದ್ದಾರೆ.

ಮೃತ ಪೇದೆಯನ್ನು ನಿಂಗಪ್ಪ ಬೂಸಣ್ಣವರ ಎಂದು ಗುರುತಿಸಲಾಗಿದೆ. ಇವರು  ಧಾರವಾಡದ ನವಲೂರ ಛಾವಣಿ ನಿವಾಸಿಯಾಗಿದ್ದಾರೆ.

ಇವರು ಪ್ರಸ್ತುತ ಧಾರವಾಡ  ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅಪಘಾತದಿಂದ ಸ್ಥಳದಲ್ಲಿ ಆಹಾರದ ಪೊಟ್ಟಣಗಳು ಚೆಲ್ಲಾಪಿಲ್ಲಿಯಾದ ದೃಶ್ಯ 
ಮನಕಲಕುವಂತೆ ಇತ್ತು ಎಂದು ಹಲವರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಮಾಹಿತಿ ಅರಿತ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಜರುಗಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *