ಬೆಳಗಾವಿ prajakiran.com : ಸಾಲಗಾರರ ಕಿರುಕುಳದಿಂದ ಬೇಸತ್ತು ಕುಟುಂಬವೊಂದು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಾಯಬಾಗ ಸಮೀಪದ ರೈಲು ಹಳಿಯ ಮೇಲೆ ಗುರುವಾರ ಈ ರ್ದುಘಟನೆ ಸಂಭವಿಸಿದೆ.
ಮೃತರನ್ನ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಸಾತಪ್ಪಾ ಅಣ್ಣಪ್ಪ ಸುತಾರ, ಮಹಾದೇವಿ ಸಾತಪ್ಪ ಸುತಾರ ಅಲಿಯಾಸ್ ಬಡಿಗೇರ, ಸಂತೋಷ ಸಾತಪ್ಪ ಸುತಾರ ಹಾಗೂ ದತ್ತಾತ್ರೇಯ ಸಾತಪ್ಪ ಸುತಾರ ಎಂದು ಗುರುತಿಸಲಾಗಿದೆ.
ತಂದೆ ಸಾತಪ್ಪನ ಮೈ ತುಂಬಾ ಸಾಲ ಮಾಡಿಕೊಂಡಿದ್ದ, ಸಾಲವನ್ನು ಮರಳಿಸಲಾಗದೇ ಸಂಕಷ್ಟದಲ್ಲಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಸಾಲಗಾರರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛಿದ್ರ ಛಿದ್ರವಾಗಿರುವ ಮೃತ ದೇಹಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ಮುಂದುವರೆದಿದೆ.