ಅಪರಾಧ

ಪ್ರೂಟ್ ಇರ್ಫಾನ ಪುತ್ರನಿಂದ ಆಪ್ತ ಮಹ್ಮದ್ ಕುಡಚಿಗೆ ಧಮ್ಕಿ,……!

ಧಾರವಾಡ prajakiran.com : ಧಾರವಾಡ ಬೈ ಪಾಸ್ ಬಳಿ ರೌಡಿಶೀಟರ್ ದಿ. ಪ್ರೂಟ್ ಇರ್ಫಾನ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಪುತ್ರ  ಅರಬಾಜ್ ಗ್ಯಾಂಗ್ ಕಟ್ಟಿಕೊಂಡು, ಮಚ್ಚು, ರಾಡ್, ಬಂದೂಕು ತೋರಿಸಿ ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಹಾಡಹಗಲೇ ಹತ್ಯೆಯಾಗಿದ್ದ ರೌಡಿಶೀಟರ್
ಪ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಪುತ್ರ ಅರಬಾಜ್ ಸೈಯ್ಯದ ಹಾಗೂ ಆತನ ಜೊತೆಗಿದ್ದ ರಹೀಂ,  ಶಾನು ಮತ್ತು ಅರಬಾಜ್ ಬಾಡಿ ಬಿಲ್ಡರ್ ಎಂಬುವವರು ಇಬ್ಬರಿಗೆ ದಮಕಿ ಹಾಕಿ ಪಿಸ್ತೂಲ್ ತೋರಿಸಿದ್ದಾರೆ ಎಂದು ದೂರುದಾರ ಮಹ್ಮದ್ ಕುಡಚಿ ಹಾಗೂ ಅಲ್ತಾಫ ಮಾಲಿ ಆರೋಪಿಸಿದ್ದಾರೆ.

ಮಹ್ಮದ್ ಕುಡಚಿ ಒಂದು ಕಾಲದಲ್ಲಿ ಅರಬಾಜ್ ತಂದೆ ಸೈಯದ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಆಪ್ತನಾಗಿದ್ದ.

ಅತನ ಹತ್ಯೆ ಬಳಿಕ ತನ್ನ ಹೆಸರಿನಲ್ಲಿ ಇದ್ದ ಆಸ್ತಿ ಹಾಗೂ ಹಣಕಾಸು ವ್ಯವಹಾರವನ್ನು ಇತನ ಹೆಸರಿಗೆ ವರ್ಗಾವಣೆ ಮಾಡಲು ನಿರಾಕರಿಸಿದ್ದ ಎನ್ನಲಾಗಿದೆ.

ಹೀಗಾಗಿ ಅರಬಾಜ್ ಸೈಯದ್ ಬೈಪಾಸ್ ಬಳಿ ಮಹ್ಮದ ಕುಡಚಿ ಹಾಗೂ ಅಲ್ತಾಪ್ ಮಾಲಿಯನ್ನು ಕರೆದು ದಮಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ.

 

ಈ ಕುರಿತು ದೂರು ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಅರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಆರೋಪಿಗಳ ಬಂಧನದ ಬಳಿಕವಷ್ಟೇ  ಸತ್ಯಾಂಶ ಹೊರಬರಲಿದೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *