ಧಾರವಾಡ prajakiran.com : ಧಾರವಾಡ ಬೈ ಪಾಸ್ ಬಳಿ ರೌಡಿಶೀಟರ್ ದಿ. ಪ್ರೂಟ್ ಇರ್ಫಾನ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಪುತ್ರ ಅರಬಾಜ್ ಗ್ಯಾಂಗ್ ಕಟ್ಟಿಕೊಂಡು, ಮಚ್ಚು, ರಾಡ್, ಬಂದೂಕು ತೋರಿಸಿ ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ಹಾಡಹಗಲೇ ಹತ್ಯೆಯಾಗಿದ್ದ ರೌಡಿಶೀಟರ್
ಪ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಪುತ್ರ ಅರಬಾಜ್ ಸೈಯ್ಯದ ಹಾಗೂ ಆತನ ಜೊತೆಗಿದ್ದ ರಹೀಂ, ಶಾನು ಮತ್ತು ಅರಬಾಜ್ ಬಾಡಿ ಬಿಲ್ಡರ್ ಎಂಬುವವರು ಇಬ್ಬರಿಗೆ ದಮಕಿ ಹಾಕಿ ಪಿಸ್ತೂಲ್ ತೋರಿಸಿದ್ದಾರೆ ಎಂದು ದೂರುದಾರ ಮಹ್ಮದ್ ಕುಡಚಿ ಹಾಗೂ ಅಲ್ತಾಫ ಮಾಲಿ ಆರೋಪಿಸಿದ್ದಾರೆ.
ಮಹ್ಮದ್ ಕುಡಚಿ ಒಂದು ಕಾಲದಲ್ಲಿ ಅರಬಾಜ್ ತಂದೆ ಸೈಯದ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಆಪ್ತನಾಗಿದ್ದ.
ಅತನ ಹತ್ಯೆ ಬಳಿಕ ತನ್ನ ಹೆಸರಿನಲ್ಲಿ ಇದ್ದ ಆಸ್ತಿ ಹಾಗೂ ಹಣಕಾಸು ವ್ಯವಹಾರವನ್ನು ಇತನ ಹೆಸರಿಗೆ ವರ್ಗಾವಣೆ ಮಾಡಲು ನಿರಾಕರಿಸಿದ್ದ ಎನ್ನಲಾಗಿದೆ.
ಹೀಗಾಗಿ ಅರಬಾಜ್ ಸೈಯದ್ ಬೈಪಾಸ್ ಬಳಿ ಮಹ್ಮದ ಕುಡಚಿ ಹಾಗೂ ಅಲ್ತಾಪ್ ಮಾಲಿಯನ್ನು ಕರೆದು ದಮಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಅರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಆರೋಪಿಗಳ ಬಂಧನದ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ.