ಹುಬ್ಬಳ್ಳಿ prajakiran.com : ಮದುವೆಯಾಗಲು ಯುವತಿ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಕಸಾಯಿ ಓಣಿಯಲ್ಲಿ ಶನಿವಾರ ನಡೆದಿದೆ.
ಮಲ್ಲಿಕ್ ಬೇಪಾರಿ (30) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.
ಮಲ್ಲಿಕ್ ಕೆಲವು ದಿನಗಳಿಂದ ಯುವತಿಯೊಬ್ಬಳನ್ನ ಪ್ರಿತಿಸುತ್ತಿದ್ದ. ಯುವತಿಮನೆಗೆ ತೆರಳಿ ಮದುವೆ ಮಾಡಿಕೊಳ್ಳುವ ಕುರಿತು ಪ್ರಸ್ತಾಪ ಮಾಡಿದ್ದ. ಆದ್ರೆ ಮಲ್ಲಿಕನ ಮದುವೆ ಪ್ರಸ್ತಾಪವನ್ನು ಯುವತಿ ಮನೆಯವರು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸತ್ತ ಯುವಕ ಮೈ ಅಬ್ ಮರ್ತಾ ಹು ಎಂದು ಸ್ನೇಹಿತನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನೇಣಿಗೆ ಶರಣಾಗಿದ್ದಾನೆ.
ಕೂಡಲೇ ಯುವಕನ ಮನೆಗೆ ಧಾವಿಸಿದ ಸ್ನೇಹಿತರು ನೇಣಿನ ಕುಣಿಕೆಯಲ್ಲಿ ಬಿದ್ದಿದ್ದ ಮಲ್ಲಿಕನ ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸಂಬಂಧ ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಮುಂದುವರೆದಿದೆ.