ಧಾರವಾಡ ಪ್ರಜಾಕಿರಣ.ಕಾಮ್ : ಮಹಿಳೆಯೊಬ್ಬಳನ್ನು ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಸಾವಿತ್ರಿ ದಾಸ್ತಿಕೊಪ್ಪ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆದಿದ್ದು,
ಶಿವಶಂಕ್ರಯ್ಯ ಮಹಾದೇವ ಪೂಜಾರ ಹಲ್ಲೆ ಮಾಡಿದ ಯುವಕ.
ಮೂಲತಃ ಕಲಘಟಗಿ
ತಾಲೂಕಿನ ಬೇಗೂರ ಗ್ರಾಮದ ಮಹಿಳೆ ಸಾವಿತ್ರಿ ಕಳೆದ ಕೆಲವು ದಿನಗಳಿಂದ ಮುಮ್ಮಿಗಟ್ಟಿಯಲ್ಲಿ ವಾಸಿಸುತ್ತಿದ್ದಳು.
ಧಾರವಾಡ ತಾಲೂಕಿನ
ನರೇಂದ್ರ ಗ್ರಾಮದ ಶಿವಶಂಕ್ರಯ್ಯನು ಸಾವಿತ್ರಿಗೆ 25 ಸಾವಿರ ರೂಪಾಯಿ ಸಾಲ ಕೊಟ್ಡಿದ್ದನು.
ತಾನು ಕೊಟ್ಟಿದ್ದ ಸಾಲದ ಹಣ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದಾಗ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.
ಜಗಳ ವಿಕೋಪ ತಿರುಗಿದಾಗ ಶಿವಶಂಕ್ರಯ್ಯ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಸಾವಿತ್ರಿಯ ಮುಖ ಮತ್ತು ಕೈಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಗರಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.