ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ವಿನ್ಯಾಸಗಳ ವಿರುದ್ಧ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸಮರ
ಮುಂದುವರೆದಿದೆ.
ಅಧ್ಯಕ್ಷ ನಾಗೇಶ ಕಲಬುರಗಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಗುರುವಾರ ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದಲ್ಲಿ ಅನಧಿಕೃತವಾಗಿ ಹೆಚ್ಚುತ್ತಿರುವ ವಿನ್ಯಾಸವನ್ನು ಬೆಳಗ್ಗೆಯಿಂದಲೇ ತೆರವುಗೊಳಿಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ ತಿಳಿಸಿದ್ದಾರೆ.
ಕೆಲಗೇರಿ ಸೇತುವೆ ಬಲಭಾಗದಲ್ಲಿ ಇದೀಗ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ನಡೆದಿದೆ. ಹತ್ತು ಹಲವು ಅನಧಿಕೃತ ಲೇ ಔಟ್ ಮಾಲೀಕರು ಜಮೀನಿನಲ್ಲಿ ಹಾಕಿದ್ದ ಕಲ್ಲುಗಳನ್ನು ತೆರವು ಮಾಡಲಾಯಿತು.
ಈ ಕಾರ್ಯಾಚರಣೆ ನಿತ್ಯ ನಿರಂತರವಾಗಿ ನಡೆಯಲಿದೆ ಎಂದು
ಹುಡಾ ಅಧ್ಯಕ್ಷ ಎಚ್ಚರಿಸಿದ್ದಾರೆ.
ಕೆಲಗೇರಿ ಬಳಿ ತಲೆ ಎತ್ತಿರುವ ಅನಧಿಕೃತ ಲೇಔಟ್ ವಿವರ ಇಂತಿದೆ.