ಬೆಂಗಳೂರು prajakiran.com : ಕರೋನಾ ಆತಂಕದ ನಡುವೆಯೇ ಕಾಲೇಜು ಆರಂಭವಾದ ಬೆನ್ನಲ್ಲೇ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ನಿಗದಿತ ಅವಧಿಗಿಂತ ವಿಳಂಭವಾಗಿ ದಿನಾಂಕ ಪ್ರಕಟಿಸಲಾಗಿದ್ದು, ಮೇ 24 ರಿಂದ ಜೂನ್ 10 ವರೆಗೆ ದ್ವೀತಿಯ ಪಿಯುಸಿ ಪರೀಕ್ಷೆ ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ
ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮೇ 24ರಂದು ಭೌತಶಾಸ್ತ್ರ, ಇತಿಹಾಸ, ಮೇ 25ರಂದು ಮೈನಾರಿಟಿ ವಿಷಯಗಳು,
26 ರಂದು ಭೂಗರ್ಭ ಶಾಸ್ತ್ರ, ಲಾಜಿಕ್, ಬೇಸಿಕ್ ಗಣಿತ, ಹೋಂ ಸೈನ್ಸ್, 27ರಂದು ಆಪ್ಶನಲ್ ಕನ್ನಡ, ಅಕೌಂಟೆನ್ಸಿ, ಗಣಿತ, 28ರಂದು ಉರ್ದು, ಸಂಸ್ಕೃತ, 29ರಂದು ರಾಜ್ಯಶಾಸ್ತ್ರ,31ರಂದು ರಸಾಯನಶಾಸ್ತ್ರ, ಬಿಸನೆಸ್ ಸ್ಟಡೀಸ್, ಎಜುಕೇಶನ್, ಜೂನ್ 1ರಂದು ಕರ್ನಾಟಕ ಮ್ಯೂಸಿಕ್,ಹಿಂದುಸ್ಥಾನಿ ಮ್ಯೂಸಿಕ್ ಪರೀಕ್ಷೆ ನಡೆಯಲಿವೆ ಎಂದು ವಿವರಿಸಿದರು.
ಇನ್ನು ಜನವರಿ 1 ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಹಿಂದೆ ಇದ್ದ ಆರ್ಥಿಕ ಪರಿಸ್ಥಿತಿ ಈಗ ಇಲ್ಲ, ಕೊರೊನಾದಿಂದ ಆರ್ಥಿಕವಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಜ್ಯದ ಎಲ್ಲಾ ಶಾಲೆಗಳು ಕಳೆದ ಬಾರಿ ತೆಗೆದುಕೊಂಡಿದ್ದು ಶಾಲೆಗಳಲ್ಲಿ ಬೋಧನಾ ಶುಲ್ಕದಲ್ಲಿ 70% ಮಾತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.
ಬೋಧನಾ ಶುಲ್ಕ ಮಾತ್ರ ಪಡೆಯಬೇಕು. ಅಭಿವೃದ್ಧಿ ಶುಲ್ಕ ಪಡೆಯಬಾರದು.
ಯಾವುದೇ ಶಿಕ್ಷಣ ಸಂಸ್ಥೆ ಇದಕ್ಕಿಂತ ಕಡಿಮೆ ಮಾಡುತ್ತೆ ಅಂದ್ರೆ ಸಂತೋಷ.
ಕಳೆದ ವರ್ಷದ ಬೋಧನಾ ಶುಲ್ಕದಲ್ಲಿ 70% ಮಾತ್ರ ಪಡೆಯಬೇಕು. ಈಗ ಕಟ್ಟಬೇಕಾದ ಶುಲ್ಕ 2-3 ಕಂತಿನಲ್ಲಿ ಕಟ್ಟಲು ಅವಕಾಶ ಪೋಷಕರಿಗೆ ಸಂಸ್ಥೆಗಳು ಕೊಡಬೇಕು ಎಂದು ಹೇಳಿದರು.
ಯಾವುದೇ ತಕರಾರು ಬಂದರೆ ಜಿಲ್ಲಾ ಹಂತದಲ್ಲಿ ಸಮಿತಿ ರಚನೆ ಮಾಡಿ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ.
ಫೀಸ್ ಜಾಸ್ತಿ ಕಟ್ಟಿದ್ರೆ ಹೆಚ್ಚುವರಿ ಫೀಸನ್ನ ಮುಂದಿನ ವರ್ಷದ ಫೀಸ್ ಗೆ ಸರಿದೂಗಿಸಿಕೊಳ್ಳಬೇಕು. ಕೇವಲ ಬೋಧನಾ ಶುಲ್ಕ ಮಾತ್ರ ಪಡೆಯಬೇಕು.
ಹಾಗೆಯೇ ರಾಜ್ಯದ ಎಲ್ಲಾ ಶಾಲೆಗಳಿಗೂ ನಿಯಮ ಅನ್ವಯಿಸುತ್ತದೆ ಎಂದರು.
ಇನ್ನು ಸಿಬಿಎಸ್ಸಿ, ಐಸಿಎಸ್ಸಿ, ಸ್ಟೇಟ್ ಸಿಲೇಬಸ್ ಎಲ್ಲರಿಗೂ ಅನ್ವಯವಾಗಲಿದೆ ಎಂದು ಸ್ಪಷ್ಟ ಪಡಿಸಿದರು.
ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ :
ಕಂಪ್ಯೂಟರ್, ಸ್ವಿಮ್ಮಿಂಗ್ ಫುಲ್ ಸೇರಿದಂತೆ ಹೆಚ್ಚಿನ ಚಟುವಟಿಕೆ ಶುಲ್ಕವೂ ಪಡೆಯೋ ಹಾಗಿಲ್ಲ. ಐಚ್ಚಿಕ ಶುಲ್ಕ,ಆನ್ ಲೈನ್ ಕ್ಲಾಸ್ ಗೂ ಹೆಚ್ಚುವರಿ ಫೀಸ್ ಪಡೆಯೋ ಆಗಿಲ್ಲ, 30% ಶುಲ್ಕ ಕಡಿತ ಮಾಡಲಾಗಿದೆ.
ಇದರ ಜೊತೆಗೆ ಸ್ಕೂಲ್ ವ್ಯಾನ್ ಶುಲ್ಕ ಪಡೆಯೋ ಆಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ.
ಇದನ್ನು ರಾಜ್ಯದ ಎಷ್ಟು ಶಾಲಾ ಕಾಲೇಜುಗಳಲ್ಲಿ ಪಾಲಿಸಲಾಗುತ್ತದೆ ಎಂಬುದು ಕಾದು ನೋಡಬೇಕು.