ರಾಜ್ಯ

ವಿನಯ ಕುಲಕರ್ಣಿ ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಕೂಡಲಸಂಗಮ ಸ್ವಾಮೀಜಿ

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಕುಟುಂಬ ಸದಸ್ಯರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದೇವೆ. ಕಾನೂನಾತ್ಮಕ ಹೋರಾಟ ನಡೆದಿದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದರು.

ಅವರು ಶುಕ್ರವಾರ ಧಾರವಾಡದ ವಿನಯ ಕುಲಕರ್ಣಿ ನಿವಾಸಕ್ಕೆ ಭೇಟಿ‌ ನೀಡಿ ಕುಟುಂಬಸ್ಥರೊಂದಿಗೆ  ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿನಯ್ ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿ ಹೊರ ಬಂದ ಸ್ವಾಮೀಜಿ, 

ವಿನಯ ಕುಲಕರ್ಣಿ ಅವರ ಬಂಧನದಿಂದ ಅವರ ಕುಟುಂಬಸ್ಥರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ವಿನಯ್ ಅವರು ನಮ್ಮ ಸಮಾಜದ ನಾಯಕರು. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.

 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

ಚನ್ನಮ್ಮ, ಬಸವಣ್ಣ, ಅಕ್ಕಮಹಾದೇವಿ, ಸಿದ್ದರೂಢರ ಆಶೀರ್ವಾದ ಅವರ ಕುಟುಂಬದ ಮೇಲಿದೆ. ಅನ್ಯಾಯ ಆದಾಗ ಜಾತಿ, ಮತ, ಪಂಥ ಬೇಧವಿಲ್ಲ.

ಅನ್ಯಾಯ ಆದವರ ಪರ ನಾವಿರುತ್ತೇವೆ. ಯಾರಿಗೆ ಯಾವುದೇ ಅನ್ಯಾಯ ಆದರೆ ಅವರ ಕಷ್ಟಕಾಲಕ್ಕೆ ಸ್ಪಂದಿಸಬೇಕು ಎಂದರು.

ಸ್ವಾಮೀಜಿಯಾದವರು ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಬೇಕು. ನಿನ್ನೆ ವಿನಯ ವಿಚಾರಣೆ ನಡೆದಾಗ ವಿಚಾರಣೆ ರೀತಿ ಖಂಡಿಸಿದ್ದೇನೆ. ಬಂಧನವಾದ ಹಿನ್ನೆಲೆ‌ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಲು ಬಂದಿರುವೆ ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *