ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಮತ್ತೆ ನೆತ್ತರು ಹರದಿದೆ.
ನಾಲ್ಕು ದಿನಗಳಲ್ಲಿ ನಾಲ್ಕು ಹೆಣಗಳು ಸಾಲಾಗಿ ಬಿದ್ದಿವೆ. ಹೀಗಾಗಿ
ಜನ ನೆಮ್ಮದಿಯಿಂದ ಓಡಾಡಲು ಹೆದರುವಂತಾಗಿದೆ.
ಹೌದು ಇದು ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ.
ಧಾರವಾಡದ ವಿಮಲ್ ಹೋಟೆಲ್ ಕುಕ್ ನಿನ್ನೆ ತಡರಾತ್ರಿ ಕೊಲೆಯಾಗಿದ್ದಾನೆ.
ಮರ್ಡರ್ ಆದ ಫಕ್ಕೀರೇಶ್ ಮೈಲಾರಪ್ಪ ಪ್ಯಾಟಿ (40). ಈತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿಯವನೆಂದು ಎಂದು ಗುರುತಿಸಲಾಗಿದೆ.
ಈತ ಧಾರವಾಡದ ಸಂಗಮ್ ಟಾಕೀಜ್ ಬಳಿಯ ವಿಮಲ್ ಎಗ್ರೈಸ್ ಹೋಟೆಲ್ ಕುಕ್ ಆಗಿ ಕೆಲಸಕ್ಕೆ ಬಂದಿದ್ದ.
ಇವನ ಜೊತೆಗೆ ಸಪ್ಲಯರ್ ಆಗಿ ಕೆಲಸ ಮಾಡುತ್ತಿದ್ದ ಕುಕ್ ಕನ್ನಯ್ಯ ಕೆ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಕಬ್ಬಿಣದ ಸರಳಿನಿಂದ ಹೊಡೆದು ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕೊಲೆಗೆ ಕಾರಣ ಪತ್ತೆ ಮಾಡಲು ಧಾರವಾಡ ಶಹರ ಠಾಣೆ ಪೊಲೀಸರು ಮುಂದಾಗಿದ್ದಾರೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಮೇಲೆ ಮರಿ ಪುಢಾರಿಗಳಿಗೆ, ರೌಡಿಗಳಿಗೆ ಯಾವುದೇ ರೀತಿಯ ಭಯವಿಲ್ಲದಂತಾಗಿದೆ ಎಂದರೆ ತಪ್ಪಾಗಲಾರದು.
ಈಗಲಾದರೂ ಪೊಲೀಸ್ ಇಲಾಖೆ ತನ್ನ ಹಿಂದಿನ ಖದರ್ ತೋರಿಸದಿದ್ದರೆ, ಪಾತಕ ಲೋಕ ಮಟ್ಟ ಹಾಕಲು ಅಸಾಧ್ಯ ಎಂಬುದು ಗುಟ್ಟಾಗಿ ಉಳಿಯುವುದಿಲ್ಲ.