ಧಾರವಾಡ prajakiran.com : ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ತಂದೆಯೊಬ್ಬ ತನ್ನ ಮಗನಿಂದಲೇ ಕೊಲೆಯಾದ ಘಟನೆ ನಡೆದಿದೆ.
ಪುಂಡಲೀಕ ಒಂಟಿಗಡದ ಎನ್ನುವ ತಂದೆಯೇ ತನ್ನ ಕರುಳ ಕುಡಿಯಿಂದ ಕೊಲೆಯಾಗಿ ಹೋದ ನತದೃಷ್ಟನಾಗಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ಪುಂಡಲೀಕ ಮಗ ಹಾಗೂ ತಾಯಿಗೆ ಕೊಡಲಿ ಹಿಡಿದು ಹೊಡೆಯಲು ಹೋಗಿದ್ದ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಮಗನೂ ಅದೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.