ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಕೊಲೆಗಳು ನಿಲ್ಲುತ್ತಲೇ ಇಲ್ಲ ಎಂದರೆ ತಪ್ಪಾಗಲಾರದು. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ.
ಧಾರವಾಡದ ಕಮಲಾಪುರದಲ್ಲಿ ಐದನೇ ದಿನಕ್ಕೆ ಐದನೇ ಕೊಲೆ ನಡೆದಿದೆ.
ಧಾರವಾಡದ ಕಮಲಾಪುರದಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಮಗುವಿನ ಶವವೊಂದು ಪತ್ತೆಯಾಗಿದೆ.
ಮನೆಯಲ್ಲಿಯೇ ಶವ ಪತ್ತೆ ಯಾಗಿದ್ದು, ಸಹನಾ ಹಿರೇಮಠ(5) ಕೊಲೆಗೀಡಾದ ಮಗುವಾಗಿದೆ
ತಾಯಿ ಜ್ಯೋತಿ ಹಿರೇಮಠ ಜೊತೆ ವಾಸಿಸುತ್ತಿದ್ದ ಮಗು, ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಕೊಲೆಯಾಗಿದೆ ಎಂದು ಹೇಳಲಾಗುತ್ತದೆ.
ಘಟನಾ ಸ್ಥಳಕ್ಕೆ ಧಾರವಾಡದ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ
ವಿಕಲಚೇತನವಾಗಿದ್ದ ಮಗುವನ್ನು ತಾಯಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ
ತಾಯಿಯನ್ನೇ ವಶಕ್ಕೆ ಪಡೆದಿರುವ ಪೊಲೀಸರು
ತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ.