ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನತ ನಗರದ ಔನು ಜಾಫರ್ ಇರಾನಿ ಹಾಗೂ ರಿಯಾಜ್ ಅಹ್ಮದ ನಜೀರ್ ಅಹ್ಮದ ಹಂಚಿನಮನಿ ಬಂಧಿತರು.
ಇವರು ಜನ್ನತ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳಿಂದ ೨೦ ಸಾವಿರ ರೂ. ಮೌಲ್ಯದ ೭೩೦ ಗ್ರಾಮ್ ಗಾಂಜಾ ಮತ್ತು ೧೭೩೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಇತ್ತೀಚೆಗೆ ಗಾಂಜಾ ಹಾವಳಿ ವಿಪರೀತವಾಗಿದ್ದು, ಯುವಕರು, ಧಮ್ ಧಮ್ ಅರೇ ಎಕ್ ಧಮ್ ಎನ್ಬುತ್ತಿದ್ದಾರೆ.
ಇದನ್ನು ಬೇರು ಸಮೇತ ಮಟ್ಟ ಹಾಕಲು ಪೊಲೀಸರು ಮುಂದಾಗಬೇಕಿದೆ