*ಧಾರವಾಡದ ರೌಡಿಶೀಟರ್ ತಿರುಪತಿ ಹಿರೇಮನಿ ಗಡಿಪಾರು*
*ಧಾರವಾಡದಲ್ಲಿ ಹೆಚ್ಚಾದ ಅಪರಾಧ ಚಟುವಟಿಕೆ ಹಿನ್ನಲೆ*
*ರೌಡಿಶೀಟರ್ಗಳ ಗಡಿಪಾರಿಗೆ ಚಾಲನೆ*
*ಕಲಬುರ್ಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು*
ಧಾರವಾಡ ಪ್ರಜಾಕಿರಣ.ಕಾಮ್ :
ವಿದ್ಯಾನಗರಿ ಧಾರವಾಡದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ
ರೌಡಿಶೀಟರ್ಗಳ ಗಡಿಪಾರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ಧಾರವಾಡದ ರೌಡಿಶೀಟರ್
ತಿರುಪತಿ ತಿಮ್ಮಣ್ಣ ಹಿರೇಮನಿ(30) ಗಡಿಪಾರಿಗೆ ಒಳಗಾದ ರೌಡಿಶೀಟರ್ ಆಗಿದ್ದಾನೆ.
ತಿರುಪತಿ, ಧಾರವಾಡದ ಲಕ್ಷ್ಮೀಸಿಂಗನಕೇರಿ ಬಡಾವಣೆ ನಿವಾಸಿಯಾಗಿದ್ದು, ಆತನ ವಿರುದ್ಧ ಧಾರವಾಡದ
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಅಕ್ರಮ ಚಟುಚಟಿಕೆ ಹಾಗೂ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ.
ಇದರೊಂದಿಗೆ ವಿವಿಧ
ಆಸ್ತಿ ವಿವಾದಗಳಲ್ಲಿ ಮಧ್ಯಪ್ರವೇಶಿಸಿ, ಬೆದರಿಸಿ ಆಸ್ತಿ ಕಬಳಿಸುವ ಕೃತ್ಯದಲ್ಲೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಆತನ ವಿರುದ್ದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಗಡಿಪಾರು ಮಾಡಲು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಆತನನ್ನು ಫೆ. 22ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ಕಲಬುರ್ಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ಗಡಿಪಾರು ಆದೇಶ
ಆರು ತಿಂಗಳ ಅವಧಿಯದಾಗಿದೆ ಎಂದು
ಗಡಿಪಾರು ಮಾಡಿರುವ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ.