ಧಾರವಾಡ prajakiran.com : ಪತ್ನಿಯ ಶೀಲ ಶಂಕಿಸಿ ಪತಿರಾಯನೊಬ್ಬ ಚಾಕು ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಧಾರವಾಡದ ಮೆಹಬೂಬನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡದಿದೆ.
ನಿನ್ನೆ ರಾತ್ರಿ ಇಸಾಕ್ ಜಾಗಿರದಾರ ಎನ್ನುವನು ಪತ್ನಿಗೆ ಚಾಕು ಇರಿದು, ಧಾರವಾಡದ ಉಪನಗರ ಪೊಲೀಸರಿಗೆ ಶರಣಾಗಿದ್ದ.
ನಿನ್ನೆ ಈ ಕುರಿತು ಹಾಫ್ ಮರ್ಡರ್ ಕೇಸ್ ದಾಖಲಾಗಿತ್ತು.
ಆದರೆ ಇಂದು ಚಿಕೆತ್ಸೆ ಫಲಿಸದೇ ಪತ್ನಿ ಆಸಮಾ ಸಾವನ್ನಪ್ಪಿದ್ದು, ಗಂಡನ ಮೇಲೆ ಕೊಲೆ ಕೇಸ್ ದಾಖಲಾಗಿದೆ.