ಸಿನಿಮಾ

ಭರವಸೆ ಕಳೆದುಕೊಳ್ಳಬೇಡಿ, ನಾವು ನಿಮ್ಮೊಂದಿದ್ದೇವೆ : ಸೋನು ಸೂದ್

ಮುಂಬೈ prajakiran.com : ದೇಶದಲ್ಲಿ ಕೊರೋನಾ ಸೋಂಕಿನಿಂದ ಜನರು ಪಡುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ‘ಸೋನು ಸೋದ್ ಫೌಂಡೇಶನ್’ ಹಗಲಿರುಳು ಕೆಲಸ ಮಾಡುತ್ತಿದೆ. ದೇಶದ ಯಾವುದೇ ಮೂಲೆಯಿಂದ ಬೆಡ್, ಆಕ್ಸಿಜನ್, ಔಷಧ ಬೇಕೆಂದು ಸಹಾಯಕೋರಿ ಸಂದೇಶ ಬಂದರೂ, ತಕ್ಷಣ ಪ್ರತಿಕ್ರಿಯಿಸಿ ಸಹಾಯ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸೋನು ಸೂದ್ ಮುಂದಾಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ಭರವಸೆ ಕಳೆದುಕೊಳ್ಳಬೇಡಿ ಬೆಂಗಳೂರು, ಬ್ರೀತ್ ಅಗೇನ್. ನಾವು ನಿಮ್ಮೊಂದಿದ್ದೇವೆ. ತುರ್ತು ಸನ್ನಿವೇಶಗಳಲ್ಲಿ […]

ಸಿನಿಮಾ

ಬಿಗ್ ಬಾಸ್ ಸೀಸನ್ 8 ರ ಲೈಟ್ಸ್ ಆಫ್ : ಮನೆಯಲ್ಲೇ ಸೇಫ್ ಆಗಿರಿ ಎಂದ ಕಿಚ್ಚ

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆ ಮೇ 24 ರ ವರೆಗೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಲಾಕ್‌ಡೌನ್ ನಿಯಮದಂತೆ ಎಲ್ಲಾ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಕನ್ನಡದ ದೊಡ್ಡ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಕನ್ನಡ ಸೀಸನ್ 8 ರ ಕಾರ್ಯಕ್ರಮವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಈ ವಿಚಾರ ‘ಬಿಗ್ ಬಾಸ್’ ಸ್ಪರ್ಧೆಗಳಿಗೆ ತಿಳಿಸಿ ಶೋ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ‘ಬಿಗ್‌ಬಾಸ್ ಸೀಸನ್ 8 ರ ಲೈಟ್ […]

ಸಿನಿಮಾ

ನಟಿ ತಾರಾಗೆ ಕೊರೋನಾ ಪಾಸಿಟಿವ್…..!

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾಗೆ ಕೊರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ನಟಿ ತಾರಾ, ನನಗೆ ಕೊರೋನಾ ಸೋಂಕು ಧೃಡವಾಗಿದ್ದು, ಸ್ನೇಹಿತರು, ಸಂಬಂಧಿಗಳು, ಅಭಿಮಾನಿಗಳು ಕರೆ ಮಾಡುವ ಮೂಲಕ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ಕೊರೋನಾ ಬಂದ ಕೂಡಲೇ ಯಾರೂ ಕೂಡ ಗಾಬರಿಯಾಗಬೇಡಿ, ಮೊದಲು ಮನೆಯಲ್ಲೇ ಐಸೋಲೇಟ್ ಆಗಿ. ದಯವಿಟ್ಟು ಮನೆಯಿಂದ […]

ಸಿನಿಮಾ

ಖ್ಯಾತ ಬಾಲಿವುಡ್ ನಟ, ಮೇಜರ್ ಬಿಕ್ರಮ್ ಜೀತ್ ನಿಧನ

ನವದೆಹಲಿ Prajakiran.com : ನಟ ಬಿಕ್ರಮ್ ಜೀತ್ ಕನ್ವರ್ ಪಾಲ್(52) ಕೊರೋನಾ ಸೋಂಕಿನಿಂದ ಶುಕ್ರವಾರ ನಿಧನರಾಗಿದ್ದಾರೆ. ಜನಪ್ರಿಯ ನಟ ಪಾಲ್ ದಿಢೀರ್ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಆಘಾತವ್ಯಕ್ತಪಡಿಸಿದ್ದಾರೆ. ನಿವೃತ್ತ ಸೇನೆ ಅಧಿಕಾರಿಯಾಗಿದ್ದ ಅವರು ಹಲವಾರು ಟಿವಿ ಸೀರಿಯಲ್ ಗಳಲ್ಲಿ ನಟಿಸುವುದರ ಜೊತೆಗೆ ಸಿನಿಮಾರಂಗದಲ್ಲಿಯೂ ದೀರ್ಘಕಾಲ ನಟಿಸಿದ್ದಾರೆ. ಸಿನಿಮಾ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ವಿಷಯ ಟ್ವೀಟ್ ಮಾಡಿದ್ದು, ನಟ, ಮೇಜರ್ ಬಿಕ್ರಮ್ ಜೀತ್ ಕನ್ವರ್ ಪಾಲ್ ನಿಧನ ಸುದ್ದಿ ಕೇಳಿ ಆಘಾತವಾಗಿದೆ. ನಿವೃತ್ತ ಸೇನಾ ಅಧಿಕಾರಿಯಾಗಿದ್ದ […]

ಸಿನಿಮಾ

ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ಕೊರೋನಾ …..!

ಹೈದ್ರಾಬಾದ್ prajakiran. com : ಬಹುಬೇಡಿಕೆಯ ಟಾಲಿವುಡ್ ನಟ, ಸ್ಟೈಲಿಶ್ ಸ್ಟಾರ್ ಎಂದೇ ಖ್ಯಾತರಾದ ಅಲ್ಲು ಅರ್ಜುನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ್ಗ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಕೊರೋನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲೇ ಇರಿ, ಸಮಯ ಮಾಡಿಕೊಂಡು ಕೊರೋನಾ ಲಸಿಕೆ ಪಡೆಯಿರಿ. ನನ್ನ ಬಗ್ಗೆ […]

ಸಿನಿಮಾ

ಕೋವಿಡ್ ಗೆ ಬಲಿಯಾದ ಪುಟ್ಟಣ್ಣ ಕಣಗಾಲ್ ಪುತ್ರ…..!

ಬೆಂಗಳೂರು prajakiran.com : ಮೊನ್ನೆಯಷ್ಟೆ ಕೋಟಿ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೋನಾ ಸೋಂಕಿನಿಂದ ಅಸು ನೀಗಿದ್ದರು. ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಹೆಸರಾಂತ ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಬೆಳಗ್ಗೆ ರಾಮು ಕಣಗಾಲ್ ನಿಧನರಾಗಿದ್ದು ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿಲಾಗಿದೆ. ಮದ್ರಾಸ್‌ನಲ್ಲಿ ಓದಿ ಬೆಳೆದಿದ್ದು, ಅನೇಕರಿಗೆ ನೃತ್ಯವನ್ನು ಕಲಿಸಿದ್ದಾರೆ. ‘ಕಣಗಾಲ್​ ನೃತ್ಯಾಲಯ’ಎನ್ನುವ ನಾಟ್ಯಶಾಲೆಯನ್ನು ರಾಮು ಕಣಗಾಲ್ ನಡೆಸುತ್ತಿದ್ದರು. Share […]

ಸಿನಿಮಾ

ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ನಿಧನ

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಪತಿ ರಾಮು ಕೊರೋನಾ ಸೋಂಕಿನಿಂದ ಇಂದು ನಿಧನರಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನಾ ಸೊಂಕು ದೃಢಪಟ್ಟಿತ್ತು, ಕೊರೋನಾ ಸೊಂಕಿನಿಂದ ಬಳುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ. ತುಮಕೂರಿನ ಕುಣಿಗಲ್‌ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು […]

ಸಿನಿಮಾ

ಕೊರೋನಾ ಧೃಡಪಟ್ಟು 5 ಕಳೆದರೂ ಇದುವರೆಗೆ ವರದಿ ಸಿಕ್ಕಿಲ್ಲ…..!

ನಟಿ ಅನು ಪ್ರಭಾಕರ್ ಅಳಲು ಬೆಂಗಳೂರು prajakiran.com : ಏ.17ಎಂದು ನನಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಮೆಸೇಜ್ ಬಂದಿದೆ. ಆದರೆ ನನ್ನ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ ಎಂದು ನಟಿ ಅನುಪ್ರಭಾಕರ್ ದೂರಿದ್ದಾರೆ. ಗೌರವಾನ್ವಿತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ, ನಾನು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ. ಪಾಸಿಟಿವ್ ಎಂಬುದಾಗಿ ಏ.17 ರಂದು ಸಂದೇಶ ಬಂದಿತ್ತು. ಆದರೆ ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ […]

ಸಿನಿಮಾ

ನಟಿ ಸಂಜನಾ ಗಲ್ರಾನಿಗೂ ವಕ್ಕರಿಸಿದ ಕೊರೋನಾ

ಬೆಂಗಳೂರು prajakiran. com : ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜನ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಬಾಲಿವುಡ್ ನಟರ ಬೆನ್ನತ್ತಿದ್ದ ಕೊರೋನಾ ಇದೀಗ ಸ್ಯಾಂಡಲ್‌ವುಡ್ ಅಂಟಿದಂತಿದೆ. ಇತ್ತಿಚೆಗೆ ಡ್ರಗ್ ಪ್ರಕರಣದಲ್ಲಿ ಸಿಲುಕ್ಕಿದ್ದ, ಗಂಡ-ಹೆಂಡತಿ ಖ್ಯಾತಿಯ ನಟಿ ಸಂಜನಾ ಗಲ್ರಾನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನೂ ತಮ್ಮ ಟ್ವಿಟರ್ ಖಾತೆಯಲ್ಲಿ ಕೊರೋನಾ ಪರೀಕ್ಷೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಸಂಜನಾ, ನಾನು ಕೊರೋನಾ ಪರೀಕ್ಷೆ ಮಾಡಿಸಿದ್ದು, ಕೋವಿಡ್ ದೃಢ ಪಟ್ಟಿದೆ. ನೀವು […]

ಸಿನಿಮಾ

ತುಳು ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ

ಮಂಗಳೂರು prajakiran.com : ತುಳು ಸಿನಿಮಾ ರಂಗದ ಯುವ ನಿರ್ದೇಶಕ ರಘು ಶೆಟ್ಟಿ (39) ಶನಿವಾರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. “ಅರ್ಜುನ್ ವೆಡ್ಸ್ ಅಮೃತ” ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ರಘು ಶೆಟ್ಟಿ, ಖಾಸಗಿ ವಾಹಿನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ನಡೆಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ರಘು ಶೆಟ್ಟಿ ಶನಿವಾರ ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮರಣ  ಹೊಂದಿದ್ದು, ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. Share on: WhatsApp