ಸಿನಿಮಾ

ವಿಶೇಷ ಚೇತನ ಮಕ್ಕಳ ಶಾಲೆಗೆ ಕಿಚ್ಚನ ಸಹಾಯ ಹಸ್ತ

ಬೆಂಗಳೂರು prajakiran.com : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೊರೋನಾ ಸಂಕಷ್ಟದಲ್ಲಿರುವ ಹಲವಾರು ಜನರಿಗೆ ನೆರವು ನೀಡತ್ತಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಮಾನಸಿಕ ವಿಶೇಷ ಚೇತನ ಮಕ್ಕಳಿರುವ ಪೃಥ್ವಿ ವಸತಿ ಶಾಲೆ ಮಳೆಯಿಂದ ಸೋರುತ್ತಿತ್ತು. ಅಲ್ಲದೆ ಲಾಕ್‌ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನೆರವು ನೀಡಲು ಮುಂದಾಗಿದೆ. ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ […]

ಸಿನಿಮಾ

ಬಹುಭಾಷಾ ತಾರೆ ಪ್ರಣಿತಾ ಸುಭಾಷ್, ನಿತಿನ್ ರಾಜು ಸಪ್ತಪದಿ

ಸದ್ದಿಲ್ಲದೆ ಹಸಿಮಣೆ ಏರಿದ ನಟಿ ಪ್ರಣಿತಾ ಬೆಂಗಳೂರು prajakiran.com : ಬಹುಭಾಷಾ ತಾರೆ ಪ್ರಣಿತಾ ಸುಭಾಷ್, ನಿತಿನ್ ರಾಜು ಜೊತೆ ಸಪ್ತಪದಿ ತುಳಿದಿದ್ದಾರೆ. ದಂಪತಿಯ ಸ್ನೇಹಿತರೊಬ್ಬರು ಶೇರ್ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಸದ್ದಿಲ್ಲದೇ ಪ್ರಣಿತಾ ಹಸೆಮಣೆ ಏರಿದ್ದಾರೆ. ಪ್ರಣಿತಾ ಹಾಗೂ ನಿತಿನ್ ರಾಜು ಅದ್ಧೂರಿ ಮದುವೆಗೆ ತಯಾರಿ ನಡೆಸಿದ್ದರು. ಆದರೆ ಕೊರೋನಾದಿಂದ ಸಿಂಪಲ್ಲಾಗಿ ಕೋವಿಡ್ ರೂಲ್ಸ್‌ನಂತೆ ಪ್ರಣಿತಾ ನಿತಿನ್ ತಮ್ಮ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಅಥವಾ ಪ್ರಣಿತಾ […]

ಸಿನಿಮಾ

ಮನೆಯಲ್ಲಿಯೇ ಪ್ರಾರ್ಥಿಸಿ, ಅಂಬರೀಷ್ ಜನ್ಮದಿನ ‘ಅಂಬಿ ಡೇ’ ಆಚರಿಸಿ ಎಂದ ಸುಮಲತಾ

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಇಂದು 69ನೇ ಜನ್ಮದಿನ. ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಷ್ ಅಂಬರೀಷ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸುವ ವೇಳೆ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಇನ್ನಿತರರು ಹಾಜರಿದ್ದರು. ಈ ಬಗ್ಗೆ ಸುಮಲತಾ ಮಾತನಾಡಿ, ಅಂಬರೀಷ್ ಅವರು ನಮ್ಮನ್ನಗಲಿ ಎರಡೂವರೆ ವರ್ಷ ಆಗಿದೆ. ಅಂಬರೀಷ್ ಅವರ ಜನ್ಮದಿನವನ್ನು ಅಂಬಿ ಡೇ ಎಂದು ಆಚರಿಸಲು ಸುಮಲತಾ ಮನವಿ ಮಾಡಿದ್ದಾರೆ. […]

ಸಿನಿಮಾ

ಮಿಡಿದ ಕ್ರೇಜಿಸ್ಟಾರ್ ಮಗನ ಮನ : ನೂರು ಜನರ ಖಾತೆಗೆ ಹಣ….!

‘ಮುಗಿಲ್ ಪೇಟೆ’ ಚಿತ್ರದಲ್ಲಿ ಕೆಲಸ ಮಾಡಿದವರ ಖಾತೆಗೆ 5000 ರೂ, ಹಾಕಿದ ಮನೋರಂಜನ್ ಬೆಂಗಳೂರು prajakiran.com : ತಮ್ಮ ನಟನೆಯ “ಮುಗಿಲ್‌ ಪೇಟೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಖಾತೆಗೂ 5000 ಹಣವನ್ನು ಹಾಕುವ ಮೂಲಕ ಸಹವರ್ತಿಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮನೋರಂಜನ್, ಮನೆಯಲ್ಲಿದ್ದರೆ ಸುರಕ್ಷಿತವಾಗಿರುತ್ತೇವೆಂದು ನಾವೆಲ್ಲ ಭಾವಿಸಿರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕೊರೊನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಈ ಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ […]

ಸಿನಿಮಾ

ಹಿರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ

ನಾಗ್ಪುರ prajakiran.com : ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್(79) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಮಹಾರಾಷ್ಟ್ರದ ನಾಗ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ. ರಾಮ್​ ಲಕ್ಷ್ಮಣ್ ಅವರು ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಸೇರಿದಂತೆ ಹಿಂದಿ, ಮರಾಠಿ ಮತ್ತು ಭೋಜ್​ಪುರಿ ಬಾಷೆಯ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಒಂದಾನೊಂದು ಕಾಲದಲ್ಲಿ ಅವರ ಹಾಡುಗಳು ಸುಪರ್ ಡುಪರ್ ಹಿಟ್ ಆಗಿ,ಸಂಗೀತಾಸಕ್ತರ ಮನಸೊರೆಗೊಂಡಿದ್ದವು Share on: WhatsApp

ಸಿನಿಮಾ

ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆಗೂ ಒಕ್ಕರಿಸಿದ ಸೋಂಕು

ಬೆಂಗಳೂರು prajakiran. com : ಸ್ಯಾಂಡಲ್ ವುಡ್ ನಟಿ ಕಿರಿಕ್ ಪಾರ್ಟಿಯ ನಾಯಕಿ ಸಂಯುಕ್ತಾ ಹೆಗಡೆ ತಂದೆ ತಾಯಿಗೆ ಸೋಂಕು ತಗುಲಿತ್ತು. ಇದೀಗ ನಟಿ ಸಂಯುಕ್ತಾರಿಗೂ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಯುಕ್ತಾ, ಅಪ್ಪ ಅಮ್ಮನಿಗೂ ಕೊರೋನಾ ಸೋಂಕು ತಗುಲಿದೆ.  ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಇಲ್ಲ. ಹೀಗಾಗಿ ಮನೆಯಲ್ಲೇ ಆರೈಕೆ ಮಾಡುತ್ತಿದ್ದೇವೆ.ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.  ಈ ನಡುವೆ ನನಗೂ ಸೋಂಕು ತಗುಲಿದೆ. ಸದ್ಯ ಅಪ್ಪ, ಅಮ್ಮನ ಆರೈಕೆ ಮುಖ್ಯವಾಗಿದೆ […]

ಸಿನಿಮಾ

ಮೆಗಾಸ್ಟಾರ್ ಮೋಹನ್ ಲಾಲ್‌ಗೆ 61ನೇ ಹುಟ್ಟುಹಬ್ಬ

ತಿರುವನಂತಪುರಂ Prajakiran.com : ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಭರಪೂರ ಶುಭಾಶಯಗಳ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಮೋಹನ್ ಲಾಲ್ ಗೆ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲಯಾಳಂ ಸಿನಿಮಾರಂಗದ ಜತೆಗೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಲಾಲ್ ನಾಲ್ಕು ದಶಕಗಳನ್ನು ಸಿನಿಮಾರಂಗದಲ್ಲೇ ಕಳೆದಿದ್ದಾರೆ. ಇದುವರೆಗೂ 340ಕ್ಕೂ ಅಧಿಕ […]

ಸಿನಿಮಾ

ತಮಿಳು ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು

ಚೆನ್ನೈ prajakiran.com : ತಮಿಳು ನಟ ಹಾಗೂ ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯಕಾಂತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ 3 ಗಂಟೆ ವೇಳೆಗೆ ವಿಜಯಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ ವಿಜಯಕಾಂತ್ ಅವರ ಆರೋಗ್ಯದ ಮೇಲ್ವಿಚಾರಣೆ ಮಾಡುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಡಿಎಂಡಿಕೆ ಪಕ್ಷ ತಿಳಿಸಿದೆ. Share on: WhatsApp

ಸಿನಿಮಾ

ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ನಟ ರಜನಿಕಾಂತ್

ಚೆನ್ನೈ prajakiran.com : ದೇಶದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳನ್ನು ನಿಯಂತ್ರಿಸಲು ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಚೇರಿಗೆ ಭೇಟಿ ನೀಡಿದ ರಜಿನಿಕಾಂತ್ ಈ ದೇಣಿಗೆ ಹಣದ ಚೆಕ್ ಹಸ್ತಾಂತರಿಸಿದ್ದಾರೆ.  ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಸರ್ಕಾರ ಹೇರಿರುವ ನಿರ್ಬಂಧಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ನಟ ರಜಿನಿಕಾಂತ್ ಮನವಿ ಮಾಡಿದರು. ತಮಿಳು ಚಿತ್ರರಂಗದ ಹಿರಿಯ ನಟ ಸುಪರ್ ಸ್ಟಾರ್ ರಜನಿಕಾಂತ್ […]

ಸಿನಿಮಾ

ಭರವಸೆ ಕಳೆದುಕೊಳ್ಳಬೇಡಿ, ನಾವು ನಿಮ್ಮೊಂದಿದ್ದೇವೆ : ಸೋನು ಸೂದ್

ಮುಂಬೈ prajakiran.com : ದೇಶದಲ್ಲಿ ಕೊರೋನಾ ಸೋಂಕಿನಿಂದ ಜನರು ಪಡುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ‘ಸೋನು ಸೋದ್ ಫೌಂಡೇಶನ್’ ಹಗಲಿರುಳು ಕೆಲಸ ಮಾಡುತ್ತಿದೆ. ದೇಶದ ಯಾವುದೇ ಮೂಲೆಯಿಂದ ಬೆಡ್, ಆಕ್ಸಿಜನ್, ಔಷಧ ಬೇಕೆಂದು ಸಹಾಯಕೋರಿ ಸಂದೇಶ ಬಂದರೂ, ತಕ್ಷಣ ಪ್ರತಿಕ್ರಿಯಿಸಿ ಸಹಾಯ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸೋನು ಸೂದ್ ಮುಂದಾಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ಭರವಸೆ ಕಳೆದುಕೊಳ್ಳಬೇಡಿ ಬೆಂಗಳೂರು, ಬ್ರೀತ್ ಅಗೇನ್. ನಾವು ನಿಮ್ಮೊಂದಿದ್ದೇವೆ. ತುರ್ತು ಸನ್ನಿವೇಶಗಳಲ್ಲಿ […]