ಸಿನಿಮಾ

ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಸಾವು….!

ಬೆಂಗಳೂರು prajakiran.com : ಕನ್ನಡದ ನೂರಾರು ಸಿನಿಮಾ ಹಾಗೂ ಸಾವಿರಾರು ನಾಟಕಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ (70) ಸಾವನ್ನಪ್ಪಿದ್ದಾರೆ. ಅವರು ಪ್ರೇಮಲೋಕ ಧಾರವಾಹಿಯ ಶೂಟಿಂಗ್ ನಲ್ಲಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಮಾನಸಿಕವಾಗಿ ನೋಂದು ಕೊಂಡಿದ್ದಅವರು ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಅವರ ಅಗಲಿಕೆ ಕುರಿತು ಜನಪ್ರಿಯ ನಿರ್ದೇಶಕ, ಟಿ,ಎನ್. ಸೀತಾರಾಮ ಅವರು ಹೀಗೆ ಬರೆದಿದ್ದಾರೆ.   […]

ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮುಂಬೈ prajakiran.com :  ಹಿಂದಿ ಸಿನಿಮಾ ರಂಗದ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಈ ವಿಚಾರ ಇಡೀ ಬಾಲಿವುಡ್ ನ್ನೇ ಬೆಚ್ಚಿಬೀಳಿಸಿದೆ. ಮಹೇಂದ್ರ ಸಿಂಗ್ ಧೋನಿಯವರ ಜೀವಾನಾಧರಿತ ಚಿತ್ರದಲ್ಲಿ ನಟಿಸಿದ್ದ, ಸುಶಾಂತ್ ಸಿಂಗ್ ರಜಪೂತ್ ಅವರು 11 ಚಿತ್ರಗಳಲ್ಲಿ ನಟಿಸಿದ್ದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆನ್ನಲಾಗಿದ್ದು, ಮನೆಗೆಲಸಗಾರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು […]

ಸಿನಿಮಾ

ಚಂದನವನದಲ್ಲಿ ಕೃಷ್ಣನ ಊರಿನ ಬೆಡಗಿ : ಕನ್ನಡ ಚಿತ್ರರಂಗಕ್ಕೆ ಕರಾವಳಿ ಕೊಡುಗೆ

ಉಡುಪಿ prajakiran.com : ಅನೇಕ ಅನೇಕ ಪ್ರತಿಭಾವಂತರನ್ನು ಕರಾವಳಿ ಕನ್ನಡ ಹಾಗು ವಿಶ್ವ ಚಿತ್ರರಂಗಕ್ಕೆ ಕೊಡುಗೆ ನೀಡಿದೆ. ಇದೀಗ ಈ ಸಾಲನ್ನು ಸೇರಲು ಕರಾವಳಿಯಿಂದ ಮತ್ತೊಂದು ಸುಂದರ ಬೆಡಗಿ ಹೊರಟಿದ್ದಾಳೆ. ಈ ಪ್ರತಿಭಾವಂತ ಯುವನಟಿಯ ಹೆಸರೇ ನಿಕಿತಾ ದೇವಾಡಿಗ. ಕೃಷ್ಣ ನ ಊರು ಉಡುಪಿಯ ಕಟಪಾಡಿ ನಿವಾಸಿ ನಿಕಿತಾ ಸದ್ಯ ಎಂಜಿನೀರಿಂಗ್ ವಿಧ್ಯಾರ್ಥಿನಿಯಾಗಿದ್ದು, ವಿದ್ಯಾಭ್ಯಾಸದ ಜೊತೆಗೆ ನಟನೆಯ ಕನಸು ಕಂಡವರು. ಯಶಸ್ವಿ ನಟಿಯಾಗುವ ಬಯಕೆ ಹೊಂದಿದ್ದ ನಿಖಿತಾಗೆ ಮೊದಲ ಚಿತ್ರದಲ್ಲಿ ನಟಿಯಾಗುವ ಅದೃಷ್ಟ ಒಲಿದಿದೆ. ಸವ್ಯಸಾಚಿ ಕ್ರಿಯೇಷನ್ […]

ಸಿನಿಮಾ

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ದುರ್ಮರಣ

ಮಂಡ್ಯ prajakiran.com : ಕಿರುತೆರೆಯಲ್ಲಿ ಭಾರೀ ಸದ್ದು ಮಾಡಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ದುರ್ಮರಣವನ್ನಪ್ಪಿದ್ದಾರೆ. ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾ.ಹೆ.75 ರಲ್ಲಿ ನಡೆದ ಅಪಘಾತ ಇದಾಗಿದೆ. ಮಂಗಳವಾರ ಸಂಜೆ 4.30 ರ ವೇಳೆ‌ಗೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ […]