*ಧಾರವಾಡದ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರಲ್ಲಿ ಪತ್ತೆ* *ಮದ್ಯ ಸಂಗ್ರಹ ಮಾಹಿತಿ ಮೇರೆಗೆ ದಾಳಿ* *ಸಿಕ್ಕಿದ್ದು ಮಾತ್ರ ಕೋಟಿ ಕೋಟಿ ಹಣ* *ಅಷ್ಟೋಂದು ಹಣ ಕಂಡು ಕಕ್ಕಾಬಿಕ್ಕಿಯಾದ ಅಧಿಕಾರಿಗಳು* *ಸ್ಥಳಕ್ಕೆ ಐಟಿ, ಬ್ಯಾಂಕ್ ಅಧಿಕಾರಿಳು ದೌಡು* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ನಾರಾಯಣಪೂರದಲ್ಲಿರುವ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆಯಿಂದ ದಾಳಿ ನಡೆದಿದೆ. ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. […]
Author: PK Team
ಹಿರಿಯ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ…!
ಹಿರಿಯ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ…! ಬೆಂಗಳೂರು ಪ್ರಜಾಕಿರಣ.ಕಾಮ್ : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದ್ವಾರಕೀಶ್ (81) ಇಹಲೋಕ ತ್ಯಜಿಸಿದರು. ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ನಟ ದ್ವಾರಕೀಶ್ 1942ರ ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. 1963ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದ್ವಾರಕೀಶ್, 1964ರಲ್ಲಿ ವೀರ ಸಂಕಲ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. […]
ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಬಳಿ ಸ್ವಂತ ವಾಹನ ಇಲ್ಲ…!
ಧಾರವಾಡ ಪ್ರಜಾಕಿರಣ.ಕಾಮ್ : ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾದರೂ ಪ್ರಹ್ಲಾದ ಜೋಶಿ ಅವರ ಬಳಿ ಒಂದೇ ಒಂದು ಸ್ವಂತ ವಾಹನವಿಲ್ಲ. ಹಾಗಂತ ಅವರು ತಮ್ಮ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ. ನಾಮಪತ್ರದ ಜೊತೆಗೆ ಜೋಶಿ ಅವರು ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಆಸ್ತಿ ಮೌಲ್ಯದ ವಿವರಣೆ ನೀಡಿದ್ದಾರೆ. ಜೋಶಿ ಕುಟುಂಬದವರ ಒಟ್ಟು ಆಸ್ತಿ 21,09,60,953 ಆಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಈ ಆಸ್ತಿ ಮೌಲ್ಯ 7 ಕೋಟಿ ಹೆಚ್ಚಳವಾಗಿದೆ. 2019ರಲ್ಲಿ ಜೋಶಿ ಕುಟುಂಬದ ಆಸ್ತಿ 14.71 ಕೋಟಿ ಇತ್ತು. […]
ಕೆ ಐ ಎ ಡಿ ಬಿ ಬಹು ಕೋಟಿ ಹಗರಣ : ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ವಜಾ
*ಕೆ ಐ ಎ ಡಿ ಬಿ ಬಹು ಕೋಟಿ ಹಗರಣ : ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ವಜಾ* *ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ* *ವಿ.ಡಿ. ಸಜ್ಜನ ಸೇರಿದಂತೆ ಹಲವರಿಗೆ ಜೈಲೂಟವೇ ಗತಿ* ಧಾರವಾಡ ಪ್ರಜಾಕಿರಣ.ಕಾಮ್ : ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಡಬಲ್ ಪೇಮೆಂಟ್ ಪಡೆಯುವ ಮೂಲಕ ಸರಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ನಷ್ಟವೆಸಗಿದ ಆರೋಪದಲ್ಲಿ ಸಿಐಡಿ ಯಿಂದ ಬಂಧನಕ್ಕೆ ಒಳಗಾಗಿ ಧಾರವಾಡ ಕೇಂದ್ರ ಕಾರಾಗೃಹ ಸೇರಿರುವ ಪ್ರಮುಖ ಆರೋಪಿ […]
ಧಾರವಾಡ : ಬೃಹತ್ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿದ ಪ್ರಹ್ಲಾದ ಜೋಶಿ
* ಬಿಎಸ್ವೈ ಸೇರಿ ಹಲವು ನಾಯಕರ ಸಾಥ್* *ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಾಥ್* *ಧಾರವಾಡ ಶಿವಾಜಿ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ರೋಡ್ ಶೋ* *ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ ಪ್ರಹ್ಲಾದ ಜೋಶಿ* ಧಾರವಾಡ ಪ್ರಜಾಕಿರಣ.ಕಾಮ್ : ಹಾಲಿ ಕೇಂದ್ರ ಸಚಿವರೂ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಸೋಮವಾರ ಸಾವಿರಾರು ಅಭಿಮಾನಿಗಳ ಹಾಗೂ ಕಾರ್ಯರ್ತರ ಬೃಹತ್ ರೋಡ್ ಶೋ ಮುಖಾಂತರ ಐದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಾಮಪತ್ರ ಸಲ್ಲಿಸಿದರು. […]
ಕರ್ನಾಟಕದಿಂದ ನೂರಾರು ಕೋಟಿ ಬ್ಲ್ಯಾಕ್ ಮನಿ ದೇಶದೆಲ್ಲಡೆ ಹೋಗುತ್ತಿದೆ : ಮೋದಿ
ಬೆಂಗಳೂರು ಪ್ರಜಾಕಿರಣ.ಕಾಮ್ : ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ. ಕರ್ನಾಟಕದಿಂದ ನೂರಾರು ಕೋಟಿ ಬ್ಲ್ಯಾಕ್ ಮನಿ ದೇಶದೆಲ್ಲಡೆ ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅವರು ಮೈಸೂರಿನ ಮಹಾರಾಜ್ ಕಾಲೇಜಿನ ಆವರಣದಲ್ಲಿ ಮೈಸೂರು, ಹಾಸನ, ಮಂಡ್ಯದ ಬಿಜೆಪಿ ಜೆಡಿಎಸ್ ಮೃತ್ರಿ ಅಭ್ಯರ್ಥಿ ಗಳ ಪರ ನಡೆದ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಮಿತಿ ಮೀರಿದ ಭ್ರಷ್ಟಾಚಾರದಿಂದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನವಿಲ್ಲದಾಗಿದೆ ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಸ್ಕಾಲರ್ […]
ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಕರ್ನಾಟಕ ನೆನಪಾಗಲ್ವಾ ?
*ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ? ಸಿ.ಎಂ ಪ್ರಶ್ನೆ* *ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ: ಚುನಾವಣೆ ಬಂತು ಓಡಿ ಬಂದ್ರಿ. ಸುಳ್ಳು ಹೇಳಿ ಹೋದ್ರಿ* *ಬಾಂಡ್ ಗಳ ಮೂಲಕ ಸಂಗ್ರಹಿಸಿದ 7600 ಕೋಟಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಕ್ರೈಂ ಅಲ್ವೇ? ಈ ಕ್ರೈಂನ ಹೊಣೆ ಹೊರುವವರು ಯಾರು?: ಉತ್ತರ ಕೊಡಿ ಮೋದಿಯವರೇ: ಸಿ.ಎಂ.ಆಗ್ರಹ* *ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದ್ರಿ? ಇಷ್ಟೊಂದು ಸುಳ್ಳು ಹೇಳೋಕೇ ಬಂದ್ರಾ ಇಲ್ಲಿಗೆ? […]
ರಾಜಕೀಯ ಬೇಕಾದ್ರೆ ಪೀಠ ತ್ಯಜಿಸಿ ಎಂದ ದಿಂಗಾಲೇಶ್ವರ ಶ್ರೀ ಭಕ್ತರು….!
*ರಾಜಕೀಯ ಬೇಕಾದ್ರೆ ಪೀಠ ತ್ಯಜಿಸಿ* *ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗೆ ಭಕ್ತರ ಗುಡುಗು* *ಚುನಾವಣಾ ಕಣದಿಂದ ಹಿಂದೆ ಸರಿಯಿರಿ..ಇಲ್ಲವೇ ಶೀಘ್ರವೇ ಮುಂದಿನ ನಿರ್ಧಾರ* ಗದಗ (ಶಿರಹಟ್ಟಿ) ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಏ. 18ರಂದು ನಾಮ ಪತ್ರ ಸಲ್ಲಿಸುವುದಾಗಿ ಘೋಷಿಸಿದ ಬೆನ್ನಹಿಂದೆಯೇ ಅವರ ವಿರುದ್ಧ ಶಿರಹಟ್ಟಿ ಭಕ್ತರು ತಿರುಗಿ ಬಿದ್ದಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿಯಾಗಿರೋ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಶುಕ್ರವಾರ ಸಭೆ ಸೇರಿದ ಸಾವಿರಾರು ಭಕ್ತರು […]
ಧಾರವಾಡದ ರೌಡಿಶೀಟರ್ ಓಂಕಾರ್ ರಾಯಚೂರು ಸೇರಿ ನಾಲ್ವರ ಬಂಧನ
*ಧಾರವಾಡ ಗ್ರಾಮೀಣ ಪೊಲೀಸ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಓಂಕಾರ್ ರಾಯಚೂರು ಹಾಗೂ ಮೂವರ ಬಂಧನ* *ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿದ್ದ ಭೂಪ* *ಈ ಹಿಂದೆ ರಾಜಿಸಂಧಾನಕ್ಕೆ ಅಂತ ಕರೆದು ಓಣಿಯ ಯುವಕ ಅಜಯ್ ಪಠಾರೆ ಮೇಲೆ ಹಲ್ಲೆ ಮಾಡಿದ್ದ* ಧಾರವಾಡ ಪ್ರಜಾಕಿರಣ.ಕಾಮ್ : ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಅನ್ನೋ ರೀತಿಯಲ್ಲಿ ಧಾರವಾಡದಲ್ಲಿ ಹಿಂದುತ್ವ, ಅದು, ಇದು ಅಂತ ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿ ಮೆರೆಯುತ್ತಿದ್ದ ಭೂಪ ಇದೀಗ ಧಾರವಾಡ ಗ್ರಾಮೀಣ ಪೊಲೀಸರ ಅತಿಥಿಯಾಗಿದ್ದಾನೆ. […]
ಧಾರವಾಡ : ಟ್ಯೂಶನ್ಗೆ ಹೋಗಿಲ್ಲ, ಮನೆಯಲ್ಲೇ ಓದಿ ಶೇ 94ರಷ್ಟು ಫಲಿತಾಂಶ
*ಟ್ಯೂಶನ್ಗೆ ಹೋಗಿಲ್ಲ, ಮನೆಯಲ್ಲೇ ಓದಿ ಶೇ 94ರಷ್ಟು ಫಲಿತಾಂಶ: ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ ಸಾಧನೆ* ಹೀಗೆ ಓದಬೇಕು. ಇಂತಿಷ್ಟೇ ಹೊತ್ತು ಓದಬೇಕು. ಈ ತರಹದ ಯಾವುದೇ ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡು ಓದಿದವಳಲ್ಲ ನಾನು. ಯಾವಾಗ ಯಾವ ವಿಷಯ ಬೇಕೋ ಅದನ್ನು ಲಕ್ಷ್ಯ ಕೊಟ್ಟು ಓದುತ್ತಿದ್ದೆ. ಅದು ಫಲ ನೀಡಿತು. ಪಿಯುಸಿ ದ್ವಿತೀಯ ಸೈನ್ಸ್ ನಲ್ಲಿ ಶೇ. 94 ರಷ್ಟು ಫಲಿತಾಂಶ ಪಡೆದ ಧಾರವಾಡದ ಪ್ರಿಸಂ ಕಾಲೇಜ್ ವಿದ್ಯಾರ್ಥಿನಿ ಹಾಗೂ ಹಿರಿಯ ಪತ್ರಕರ್ತ ಪ್ರಸನ್ನ ಕರ್ಪೂರರ ಪುತ್ರಿ […]