*ಧಾರವಾಡದ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರಲ್ಲಿ ಪತ್ತೆ*
*ಮದ್ಯ ಸಂಗ್ರಹ ಮಾಹಿತಿ ಮೇರೆಗೆ ದಾಳಿ*
*ಸಿಕ್ಕಿದ್ದು ಮಾತ್ರ ಕೋಟಿ ಕೋಟಿ ಹಣ*
*ಅಷ್ಟೋಂದು ಹಣ ಕಂಡು ಕಕ್ಕಾಬಿಕ್ಕಿಯಾದ ಅಧಿಕಾರಿಗಳು*
*ಸ್ಥಳಕ್ಕೆ ಐಟಿ, ಬ್ಯಾಂಕ್ ಅಧಿಕಾರಿಳು ದೌಡು*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ನಾರಾಯಣಪೂರದಲ್ಲಿರುವ ಆರ್ನ್ಯ ಅರ್ಪಾಂಟ್ ಮೆಂಟ್ ಮನೆ ನಂ 303 ರ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆಯಿಂದ ದಾಳಿ ನಡೆದಿದೆ.
ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.
ಆದರೆ, ಮದ್ಯ ಹುಡುಕಾಡುವ ವೇಳೆ ಸಿಕ್ಕಿದ್ದು ಮಾತ್ರ ಕೋಟಿ ಕೋಟಿ ಹಣ.
ಇದರಿಂದಾಗಿ ಕೆಲಕಾಲ ಕಕ್ಜಾಬಿಕ್ಕಿಯಾದ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಮೂರು ಟ್ರಜರಿಯಲ್ಲಿ ಹಣ ಸಿಕ್ಕಿದ್ದು, ಅಂದಾಜು 18 ಕೋಟಿ ಹಣ ಜಪ್ತಿ ಮಾಡಲಾಗಿದೆ.
ಕಳೆದ ತಿಂಗಳ ಹಿಂದೆಯಷ್ಟೇ ಹೈಕೋರ್ಟ್ ವಕೀಲರಿದ್ದು , ಕಚೇರಿ ಅಂತ ಬಾಡಿಗೆಯಲ್ಲಿದ್ದ ಬಸವರಾಜ ದತ್ತುನವರ.
ಸದ್ಯ ಮತದಾರರಿಗೆ ಹಂಚಲಿಕ್ಕೆ ತಂದಿರುವ ಹಣ ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಬಸವರಾಜ್ ದತ್ತುನ್ನವರ ವಿಚಾರಣೆ ಮಾಡುತ್ತಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ಯ ಬಿ ಶೆಟ್ಟಿ ಕಚೇರಿಯಲ್ಲಿ ಅಕೌಂಟ್ ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ದತ್ತುನ್ನವರ ಬಳಿಯಿದ್ದ ಹಣ ಸೀಜ್ ಮಾಡಿ ಪ್ಯಾಕ್ ಮಾಡುತ್ತಿರುವ ಐ ಟಿ ಅಧಿಕಾರಿಗಳು ಮತ್ತು ಬ್ಯಾಂಕ್ ಹಾಗೂ ಚುನಾವಣಾ ಸಿಬ್ಬಂದಿಗಳು
ಹಣ ಎಣಿಸಲು ಮಶಿನ್, ಪ್ರಿಂಟರ್ ಗಳನ್ನ ತೆಗೆದುಕೊಂಡು ಹೋಗಿದ್ದಾರೆ.