*ರಾಜಕೀಯ ಬೇಕಾದ್ರೆ ಪೀಠ ತ್ಯಜಿಸಿ*
*ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗೆ ಭಕ್ತರ ಗುಡುಗು*
*ಚುನಾವಣಾ ಕಣದಿಂದ ಹಿಂದೆ ಸರಿಯಿರಿ..ಇಲ್ಲವೇ ಶೀಘ್ರವೇ ಮುಂದಿನ ನಿರ್ಧಾರ*
ಗದಗ (ಶಿರಹಟ್ಟಿ) ಪ್ರಜಾಕಿರಣ.ಕಾಮ್ :
ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ
ಫಕೀರ ದಿಂಗಾಲೇಶ್ವರ ಶ್ರೀಗಳು ಏ. 18ರಂದು ನಾಮ ಪತ್ರ ಸಲ್ಲಿಸುವುದಾಗಿ ಘೋಷಿಸಿದ ಬೆನ್ನಹಿಂದೆಯೇ ಅವರ ವಿರುದ್ಧ ಶಿರಹಟ್ಟಿ ಭಕ್ತರು ತಿರುಗಿ ಬಿದ್ದಿದ್ದಾರೆ.
ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿಯಾಗಿರೋ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಶುಕ್ರವಾರ ಸಭೆ ಸೇರಿದ ಸಾವಿರಾರು ಭಕ್ತರು ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಶ್ರೀಗಳ ನಿರ್ಧಾರವನ್ನು ಸರ್ವಾನುಮತದಿಂದ ವಿರೋಧಿಸಿದರು.
ಶಿರಹಟ್ಟಿ ಮಠದ ಭಕ್ತರು ಶ್ರೀಗಳಿಗೆ ಕಣದಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದರು.
ಯಾವುದೇ ಕಾರಣಕ್ಕೂ
ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ಎಚ್ಚರಿಸಿದರು.
ಶ್ರೀಗಳ ರಾಜಕೀಯ ರಂಗ ಪ್ರವೇಶದಿಂದ ಫಕೀರೇಶ್ವರ ಮಠಕ್ಕೆ ಕಳಂಕ ಬರಬಾರದು.
ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗಿದ್ರೆ ಪ್ರಲ್ಹಾದ ಜೋಶಿ ಅವ್ರಿಗೆ ಬುದ್ಧಿ ಹೇಳಲಿ.
ಆದ್ರೆ, ಚುನಾವಣೆಯಲ್ಲಿ ಸ್ಪರ್ಧೆ ಸರಿಯಲ್ಲ ಎಂದು ಗುಡುಗಿದರು.
ಫಕೀರೇಶ್ವರ ಮಠದ ಉತ್ತರಾಧಿಕಾರಿ ಆಗಿ ಎರಡು ವರ್ಷ ಆಯ್ತು.
ಶ್ರೀಮಠದ ಅಭಿವೃದ್ಧಿ ಮಾಡಬೇಕು.
ದಿ.18 ರಂದು ನಾಮಪತ್ರ ಸಲ್ಲಿಸಬಾರದು. ಒಂದು ವೇಳೆ ನಾಮಪತ್ರ ಸಲ್ಲಿಸಿದ್ರೆ ಮತ್ತೆ ಸುದ್ದಿಗೋಷ್ಠಿ ಮಾಡಿ ಮುಂದಿನ ನಡೆ ಪ್ರಕಟಿಸುವುದಾಗಿ ಹೇಳಿಕೆ ನೀಡಿದರು.
ಇದಲ್ಲದೆ, ಶಿರಹಟ್ಟಿಯಿಂದ ಗೋಬ್ಯಾಕ್ ಅಭಿಯಾನ ಮಾಡುವ ಎಚ್ಚರಿಕೆ ನೀಡಿದರು.
ನಮ್ಮ ಮಠ ಭಾವೈಕ್ಯತೆ ಮಠ. ಒಂದು ಸಮುದಾಯವನ್ನು ನಿಂದಿಸುವುದು, ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏ. 18 ರಂದು ಮತ್ತೊಮ್ಮೆ ಭಕ್ತರ ಸಭೆಯನ್ನು ನಡೆಸಿ, ನಿರ್ಧಾರ ಮಾಡುತ್ತೇವೆ ಎಂದು ಶಿರಹಟ್ಟಿಯ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ವಿ..ವಿ. ಕಪ್ಪತನವರ್, ಪ್ರಕಾಶ ಮಹಾಜನ ಶೆಟ್ಟರ್, ಸಂದೀಪ್ ಕಪ್ಪತ್ನವರ , ಗೋವಿಂದಗೌಡರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.