*ಕೆ ಐ ಎ ಡಿ ಬಿ ಬಹು ಕೋಟಿ ಹಗರಣ : ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ವಜಾ*
*ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ*
*ವಿ.ಡಿ. ಸಜ್ಜನ ಸೇರಿದಂತೆ ಹಲವರಿಗೆ ಜೈಲೂಟವೇ ಗತಿ*
ಧಾರವಾಡ ಪ್ರಜಾಕಿರಣ.ಕಾಮ್ : ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಡಬಲ್ ಪೇಮೆಂಟ್ ಪಡೆಯುವ ಮೂಲಕ ಸರಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ನಷ್ಟವೆಸಗಿದ ಆರೋಪದಲ್ಲಿ ಸಿಐಡಿ ಯಿಂದ ಬಂಧನಕ್ಕೆ ಒಳಗಾಗಿ ಧಾರವಾಡ ಕೇಂದ್ರ ಕಾರಾಗೃಹ ಸೇರಿರುವ ಪ್ರಮುಖ ಆರೋಪಿ ಅಶ್ಫಕ್ ದುಂಡಸಿ ಜಾಮೀನಿನ ಅರ್ಜಿ ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ಏಕಸದಸ್ಯಪೀಠದ ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರು ಈ ಮಹತ್ವದ ಆದೇಶ ಹೊರಡಿಸಿದರು.
ಕೆ ಐ ಎ ಡಿ ಬಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ ಸೇರಿದಂತೆ ಅನೇಕರ ವಿರುದ್ದ ಸಿಐಡಿ ಈವರೆಗೆ ಕೇವಲ ಹನ್ನೊಂದು ನೂರು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ಹಗರಣವನ್ನು ದಾಖಲೆ ಸಮೇತ ಬಯಲಿಗೆ ತಂದಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಇದರ ವಿರುದ್ಧ ಸಿಡಿದೆದ್ದು, ಸಿ ಐಡಿ ಡಿಜಿಪಿಗೆ ದೂರು ಸಲ್ಲಿಸಿದ್ದರು.
ಅಲ್ಲದೆ, ಸಮಗ್ರ ತನಿಖೆ ನಡೆಸದಿದ್ದರೆ, ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.
ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾಗಿರುವ ಹಲವು ಆರೋಪಿಗಳಿಗೆ
ಇನ್ನು ಜೈಲೂಟವೇ ಗತಿ ಎಂಬಂತಾಗಿದೆ.