education minister sureshkumar
ರಾಜ್ಯ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸುತ್ತೋಲೆ ಹೊರಡಿಸಿ

ಹುಬ್ಬಳ್ಳಿ prajakiran.com : ರಾಜ್ಯದೆಲ್ಲಡೆ ಇರುವ ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಶೀಘ್ರವೇ ವರ್ಗಾವಣೆ ಸುತ್ತೋಲೆ ಮತ್ತು ವೇಳಾಪಟ್ಟಿಯನ್ನು ಹೊರಡಿಸಬೇಕೆಂದು ಕರ್ನಾಟಕ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಒತ್ತಾಯಿಸಿದ್ದಾರೆ.

ಈ ಕುರಿತು ಶಿಕ್ಷಣ ಸಚಿವರಿಗೆ ಮನವಿ ಪತ್ರ ಬರೆದಿರುವ ಅವರು, 5 ವರ್ಷಗಳಿಂದ ಒಂದು ಬಾರಿ ಮಾತ್ರ ವರ್ಗಾವಣೆಯಾಗಿರುವುದರಿಂದ ಸಹಸ್ರ ಸಹಸ್ರ ಶಿಕ್ಷಕರು ವರ್ಗಾವಣೆಗೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಹೀಗಾಗಿ ತಾವುಗಳು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅತೀ ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ಶೇ. 25 ಮಿತಿಯನ್ನು   ಶೇ. 40 ಕ್ಕೆ ಸಡಿಲ, ಹೊಸ ತಾಲೂಕುಗಳಿಗೆ ಖಾಲಿ ಹುದ್ದೆಗಳ ಶೇಕಡಾ ಪ್ರಮಾಣ ವಿಂಗಡಣೆ, ಪರಸ್ಪರ ವರ್ಗಾವಣೆ ನಿಯಮಗಳನ್ನು 7 ವರ್ಷದಿಂದ 3 ವರ್ಷಕ್ಕೆ ಸಡಿಲ ಮಾಡುವ ಈ  ಮೂರು ಮುಖ್ಯ ಬೇಡಿಕೆಗಳನ್ನು ಪುನರ್ ಪರಿಶೀಲಿಸಿ ನಿಯಮಗಳನ್ನು ಹೊರಡಿಸಲು ಅವರು ಕೋರಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *