ಹುಬ್ಬಳ್ಳಿ prajakiran.com : ರಾಜ್ಯದೆಲ್ಲಡೆ ಇರುವ ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಶೀಘ್ರವೇ ವರ್ಗಾವಣೆ ಸುತ್ತೋಲೆ ಮತ್ತು ವೇಳಾಪಟ್ಟಿಯನ್ನು ಹೊರಡಿಸಬೇಕೆಂದು ಕರ್ನಾಟಕ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಒತ್ತಾಯಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವರಿಗೆ ಮನವಿ ಪತ್ರ ಬರೆದಿರುವ ಅವರು, 5 ವರ್ಷಗಳಿಂದ ಒಂದು ಬಾರಿ ಮಾತ್ರ ವರ್ಗಾವಣೆಯಾಗಿರುವುದರಿಂದ ಸಹಸ್ರ ಸಹಸ್ರ ಶಿಕ್ಷಕರು ವರ್ಗಾವಣೆಗೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.
ಹೀಗಾಗಿ ತಾವುಗಳು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅತೀ ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ಶೇ. 25ರ ಮಿತಿಯನ್ನು ಶೇ. 40 ಕ್ಕೆ ಸಡಿಲ, ಹೊಸ ತಾಲೂಕುಗಳಿಗೆ ಖಾಲಿ ಹುದ್ದೆಗಳ ಶೇಕಡಾ ಪ್ರಮಾಣ ವಿಂಗಡಣೆ, ಪರಸ್ಪರ ವರ್ಗಾವಣೆ ನಿಯಮಗಳನ್ನು 7 ವರ್ಷದಿಂದ 3 ವರ್ಷಕ್ಕೆ ಸಡಿಲ ಮಾಡುವ ಈ ಮೂರು ಮುಖ್ಯ ಬೇಡಿಕೆಗಳನ್ನು ಪುನರ್ ಪರಿಶೀಲಿಸಿ ನಿಯಮಗಳನ್ನು ಹೊರಡಿಸಲು ಅವರು ಕೋರಿದ್ದಾರೆ.