ರಾಜ್ಯ

ಮನವಿ ಕೊಡಲು ಬಂದವರಿಗೆ ಉಢಾಪೆ ಉತ್ತರ ಕೊಟ್ಟ ಸಿದ್ದರಾಮಯ್ಯ

ಬಾಗಲಕೋಟೆ prajakiran.com : ಮನವಿ ಕೊಡಲು ಬಂದವರಿಗೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಢಾಪೆ ಉತ್ತರ ಕೊಟ್ಟಘಟನೆ ಗುರುವಾರ ಬಾದಾಮಿಯಲ್ಲಿ ನಡೆದಿದೆ.

ಕರೋನಾ ಪೀಡಿತ ಡಾಣಕಶಿರೂರ ಗ್ರಾಮಕ್ಕೆ ಹೋಗುವ ಮುನ್ನ ಪ್ರವಾಸಿ ಮಂದಿರದ ಬಳಿ ಬಡಮಹಿಳೆಯರು ಮನವಿ ಸಲ್ಲಿಸಲು ಬಂದಿದ್ದರು.




ಆಗ ಸಿದ್ದರಾಮಯ್ಯಅವರು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಜಿಂದಾಬಾದ್, ನೀರು ಕೊಡರೋ ಎಂದಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

ಕರೋನಾ ಲಾಕ್ ಡೌನ್ ನಂತರ ಮೂರು ತಿಂಗಳ ಬಳಿಕ ಇದೀಗ  ಕ್ಷೇತ್ರಕ್ಕೆ ಬಂದಿರುವ ಶಾಸಕರ ಬೇಜವಾಬ್ದಾರಿ ವರ್ತನೆಗೆ ಕಿಡಿ ವ್ಯಕ್ತವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವ್ಯಾಪಕವಾಗಿ ಟೀಕಿಸಲಾಗಿತ್ತು. ಈಗ ಬಂದಿದ್ದಲ್ಲದೆ  ವಿವಿಧಅಭಿವೃದ್ದಿ ಕಾಮಗಾರಿಗೆ ಚಾಲನೆ ಕೊಟ್ಟು ಜನರ ಅಹವಾಲು ಆಲಿಸುವುದು ಬಿಟ್ಟು ಇಷ್ಟೊಂದು ತರಾತುರಿಯಲ್ಲಿ ಮುಂದೆ ಸಾಗುವುದೇನಿತ್ತು ಎಂದು ಪ್ರಶ್ನಿಸಿದ್ದಾರೆ.




ಬಡ ಮಹಿಳೆಯರು ಅರಣ್ಯ ಇಲಾಖೆ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಅಲ್ಲಿ ನಮಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿರಿ ಎಂದು ಕೋರಿದರು.

ಆಗ ಸಿದ್ದರಾಮಯ್ಯ ಈ ಉಢಾಪೆ ಉತ್ತರ ಕೊಟ್ಟಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯರ ಎದುರು ಈ ರೀತಿ ಬೇಜವಾಬ್ದಾರಿ ವರ್ತನೆ ತೋರಿರುವುದು ಸರಿಯಲ್ಲ.  

ಮನವಿ ಕೊಡಲು ಬಂದವರಿಗೆ ನಡಿರಿ ಎಂದರಲ್ಲದೆ, ಈ ರೀತಿಯ ಅಸಡ್ಡೆ ತೋರಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬಅಸಮಾಧಾನ ವ್ಯಕ್ತವಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *