ಬೆಂಗಳೂರು prajakiran.com :
ಬೆಳ್ಳಂಬೆಳಗ್ಗೆ ಹುಬ್ಬಳ್ಳಿ,ಧಾರವಾಡ, ಚಿತ್ರದುರ್ಗ,ಕೋಲಾರ, ಬೆಂಗಳೂರುು ಸೇರಿದಂತೆ ರಾಜ್ಯದ ಹಲವೆಡೆ ಎಸಿಬಿ ರೇಡ್ ನಡೆದಿದೆ.
10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ಮಾಡಿರುವ ಎಸಿಬಿ
ಕೋಲಾರದ ಡಿಹೆಚ್ಓ, ಹುಬ್ಬಳ್ಳಿಇಂಜಿನಿಯರ್, ಧಾರವಾಡದ ಎಸಿಎಫ್ ಮನೆ, ಕಚೇರಿ ಮೇಲೆ ದಾಳಿ ಮಾಡಿದೆ.
ಹುಬ್ಬಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ದೇವರಾಜ್ ಶಿಗ್ಗಾಂವಿ ಮನೆ ಮೇಲೆ ರೇಡ್ ಮಾಡಲಾಗಿದೆ.
ರಾಜೀವಗಾಂಧಿ ನಗರದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಮೇಲೆ ರೇಡ್ ಆಗಿದ್ದು,
ಬೆಂಗಳೂರಿನ ಎಸಿಬಿ ಟೀಂ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಯಶವಂತಪುರದ ಫ್ಲಾಟ್ನಲ್ಲೂ ದಾಖಲೆಗಳ ಶೋಧ ನಡೆದಿದೆ.
ಕೋಲಾರದ ಡಿಹೆಚ್ಓ ಡಾ.ವಿಜಯ್ಕುಮಾರ್ಗೂ ಶಾಕ್ ನೀಡಲಾಗಿದೆ.
ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ರೇಡ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಫ್ಲಾಟ್ನಲ್ಲಿ ಪರಿಶೀಲನೆ ಮಾಡ್ತಿರೋ ಎಸಿಬಿ
ಚಿಂತಾಮಣಿ ಮನೆ ಸೇರಿದಂತೆ 6 ಕಡೆ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದೆ.
ಧಾರವಾಡದ ಎಸಿಎಫ್ ಶ್ರೀನಿವಾಸ ಮನೆ ಮೇಲೆ ಎಸಿಬಿ ದಾಳಿ ಮಾಡಲಾಗಿದೆ.
ಅರಣ್ಯ ಇಲಾಖೆ ಕ್ವಾರ್ಟರ್ಸ್ ಗೂ ಆಗಮಿಸಿರೋ ಎಸಿಬಿ ಅಧಿಕಾರಿಗಳು, ಧಾರವಾಡ ನಗರದ ಜರ್ಮನ್ ವೃತ್ತದ ಬಳಿಯ ಕ್ವಾರ್ಟರ್ಸ್
ಶ್ರೀನಿವಾಸ ಮನೆಯಲ್ಲಿ ಶೋಧ ಮಾಡಲಾಗಿದೆ.
ACB ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದೊಡ್ಡ ಕುಳಗಳನ್ನ ಬಲೆಗೆ ಕೆಡವಿದೆ.