ಧಾರವಾಡ prajakiran.com :
ಕಳೆದ ಹಲವಾರು ವರ್ಷಗಳ ಕಾಲ ಧಾರವಾಡ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ ದೇವರಾಜ್ ಶಿಗ್ಗಾಂವಿ ಹುಬ್ಬಳ್ಳಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೆಲ ಕಾಲ ಬೆಚ್ಚಿ ಬಿದ್ದಿದ್ದಾರೆ.
ಅವರ ದಾಳಿ ವೇಳೆ ಬರೋಬ್ಬರಿ 56 ಲಕ್ಷ ನಗದು, 400 ಗ್ರಾಮ ಚಿನ್ನ ದೊರೆತಿದೆ ಎಂದು ಪ್ರಜಾಕಿರಣ.ಕಾಮ್ ಗೆ ಮೂಲಗಳು ಖಚಿತ ಪಡಿಸಿವೆ.
ಸದ್ಯ ಹುಬ್ಬಳ್ಳಿಯ ರಾಜೀವಗಾಂಧಿ ನಗರದಲ್ಲಿ ವಾಸವಿರುವ ದೇವರಾಜ್ ಶಿಗ್ಗಾಂವಿ ಮನೆಯಲ್ಲಿ ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆಯ
ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಮೇಲೆ ರೇಡ್ ಆಗಿದ್ದು, ಅಕ್ರಮ ಸಂಪಾದನೆಯ ದಾಖಲೆಗಳ ಶೋಧ ನಡೆದಿದೆ.
ಬೆಂಗಳೂರಿನ ಎಸಿಬಿ ಅಧಿಕಾರಿಗಳು ರಾಜ್ಯದ ಹಲವು ಕಡೆ ಎಕಕಾಲಕ್ಕೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.
ACB ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದೊಡ್ಡ ಕುಳಗಳನ್ನ ಬಲೆಗೆ ಕೆಡವಿದೆ.
ಧಾರವಾಡದ ಸಣ್ಣ ನೀರಾವರಿ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಆರೂ ಊರು ಸುತ್ತದೆ, ಆಲದ ಮರದಂತೆ ಬೇರು ಬಿಟ್ಟಿರುವ ‘ಆ’ ಲೂರ ಅಂತಹ ಭ್ರಷ್ಟ ಅಧಿಕಾರಿಗಳಿಗೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಿಸಿ ತಾಕಿಸುವುದೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.