ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ರಾಸಲೀಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ತಮ್ಮ ಮಗಳ ಹೇಳಿಕೆ ರದ್ದುಗೊಳಿಸಬೇಕು ಎಂದು ಕೋರಿ ಆಕೆಯ ತಂದೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಆಕೆ ಒತ್ತಡಕ್ಕೆ ಒಳಗಾಗಿ 164 ಹೇಳಿಕೆ ನೀಡಿದ್ದಾಳೆ. ಆಕೆಯನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ನಾವು ಈಗಲೂ ಮನವಿ ಮಾಡುತ್ತೇನೆ. ಮನೆಗೆ ವಾಪಸ್ ಬರಬೇಕೆಂದು ಇಡೀ ಕುಟುಂಬಸ್ಥರಿಂದ ಮನವಿ ಮಾಡಿಕೊಳ್ಳುತ್ತೇನೆ.
ಈ ಪ್ರಕರಣದಲ್ಲಿ ನಾವು ಯಾರ ಪ್ರಭಾವಕ್ಕೂ ಒಳಗಾಗಿಲ್ಲ. ನಾನು ನಿವೃತ್ತ ಯೋಧ..ಕೈ ಮಾಡಿ ಕರೆದರೆ ಸಾಕಷ್ಟು ಜನ ನನ್ನ ಬೆಂಬಲಕ್ಕೆ ಬರ್ತಾರೆ.
ಸದ್ಯ ನನ್ನ ಕೈಲಾದಷ್ಟು ಹೋರಾಟ ಮಾಡುತ್ತಿದ್ದೇನೆ. ಮಿಕ್ಕಿದ್ದನ್ನು ನಂತರ ನೋಡುವೆ ಎಂದು ವಿವರಿಸಿದ್ದಾರೆ.
ಅಲ್ಲದೆ, ತಮ್ಮ ಅತ್ತೆಗೆ ಹುಷಾರಿಲ್ಲ ಎಂದು ಬೆಳಗಾವಿಯಿಂದ
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದೇವೆ.
ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಂದಿದ್ದೇವೆ. ನೀವು ನಮಗೆ ಸಹಕಾರ ನೀಡುತ್ತೀರೆಂದು ಭರವಸೆ ಇದೆ. ಎಲ್ಲರೂ ಇತ್ತ ಬರುವುದರಿಂದ ಸುತ್ತಮುತ್ತಲಿನ ಜನರಿಗೆ ಸಮಸ್ಯೆಯಾಗುತ್ತಿದೆ.
ನಮಗೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ನೋವು ತೋಡಿಕೊಂಡರು.