ಧಾರವಾಡ ಉಪನಗರ ಪೊಲೀಸರ ಜಾಣಕುರುಡು
ಅಚ್ಚರಿ ತಂದ ಪೊಲೀಸರ ನಡೆ
ಧಾರವಾಡ prajakiran.com : ಧಾರವಾಡದ ಮಾಳಾಪುರದ ಕರ್ನಾಟಕ ಗಾದಿ ಕಾರ್ಖಾನೆಯ ಸಮೀಪದ ಸರ್ವೇ ನಂಬರ್ 73/1 ನಲ್ಲಿ ಐದು ಎಕರೆ 2 ಗುಂಟೆ, 73/2 ನಲ್ಲಿ ಮೂರು ಎಕರೆ ಹಾಗೂ ಸರ್ವೇ ನಂಬರ್ 60/1 ನಲ್ಲಿ ಮೂರು ಎಕರೆ 32 ಗುಂಟೆ ಗಿರೀಶ
ಗಿರಿಯಪ್ಪನವರ ಅವರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ 2022ರ ಫೆ. 21 ರಂದು ತಡೆಯಾಜ್ಞೆ ನೀಡಿದೆ.
ಜೊತೆಗೆ ಹಾಗೂ ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿಯೂ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಮಾಹಿತಿ ಇದ್ದರೂ ಅದನ್ನು ಗಾಳಿಗೆ ತೂರಿ ಅದೇ ಸ್ಥಳದಲ್ಲಿ ಮನೆ ಕಟ್ಟಿ ಅದರ ಉದ್ಘಾಟನಾ ಸಮಾರಂಭ ನೆರವೇರಿಸುವ ಮೂಲಕ ಧಾರವಾಡದ ಕುಖ್ಯಾತ ರೌಡಿಶೀಟರ್ ದಿ. ಫ್ರೂಟ್ ಇರ್ಪಾನ್ ಸಹಚರರು ಹಣದ ದರ್ಪ ಮೆರೆದಿದ್ದಾರೆ.
ಈ ಬಗ್ಗೆ ನಾಲ್ಕು ದಿನದ ಹಿಂದೆಯೇ ಪೊಲೀಸರಿಗೆ ಮಾಹಿತಿ ಇದ್ದರೂ ಜಾಣಕುರುಡು ತೋರಿಸಿದ್ದಾರೆ.
ಪ್ರೂಟ್ ಇರ್ಫಾನ್ ಸಹಚರರಾದ
ಮಹ್ಮದ್ ಕುಡಚಿ, ಸಾಧಿಕ್ ರೂಪ್ ಖಾನ್ ಸೇರಿದಂತೆ ಹಲವರ ವಿರುದ್ದ
ದೂರು ಹಿಡಿದು ಪಾರ್ವತಿ ಬಿ. ಕಾಳಣ್ಣವರ್, ಸುರೇಶ್ ಎಫ್ ಗಿರಿಯಪ್ಪನವರ, ದ್ರಾಕ್ಷಾಯಣಿ ಬಿ ನರಗುಂದ, ರತ್ನಾ ಬಿ ಪಾಟೀಲ, ಶಾಂತಾ ಪಿ
ವಡಟ್ಟಿ ಹಾಗೂ ಶಂಕುತಲಾ ಎಂ. ಕಬ್ಬೂರ ಕುಟುಂಬದ ಸದಸ್ಯರು ಧಾರವಾಡದ ಉಪನಗರ ಪೊಲೀಸ್ ಬಳಿ ಹಲವಾರು ಬಳಿ ಅಲೆದಾಡಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ.
ಕೊನೆಗೆ ಅನಿವಾರ್ಯವಾಗಿ ಪೊಲೀಸ್ ಆಯುಕ್ತ ಲಾಬುರಾವ್ ಅವರ ಗಮನಕ್ಕೆ ತಂದಾಗ, ಅವರು ತಕ್ಷಣ ಸ್ಪಂದಿಸುವಂತೆ ಸೂಚಿಸಿದ್ದಾರೆ.
ಆದರೆ ಪೊಲೀಸರು ಮತ್ತೇ ಸ್ಥಳೀಯ ಬಂದೋಬಸ್ತ್ ನೆಪ ಹೇಳಿ ಕರ್ತವ್ಯ ಹಾಗೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಜಮೀನಿನ ಮಾಲೀಕ ಗಿರೀಶ್ ಗಿರಿಯಪ್ಪನವರ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ ಈ ಬಗ್ಗೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿವರಿಸಿದ್ದಾರೆ.
ಪೊಲೀಸರ ಈ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು ಎಂಬ ಮಾಹಿತಿ ಇದ್ದರೂ ಸಿವಿಲ್ ವಿಷಯ ಎಂದು ಕೈ ತೊಳೆದುಕೊಂಡರೆ ಜನತೆ ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು.
ಅಲ್ಲದೆ ಕಾನೂನು ತೊಡಕು ಇದ್ದಾಗ ಫ್ರೂಟ್ ಇರ್ಫಾನ್ ಗ್ಯಾಂಗ್ ಜೊತೆಗೆ ಕಾದಾಟಕ್ಕೆ ಇಳಿಯಲು ಸಾಧ್ಯವಾ ಎಂಬ ಜಿಜ್ಞಾಸೆ ಎಲ್ಲರಿಗೂ ಕಾಡತೊಡಗಿದೆ.
ನಿಧಾನವಾಗಿ ಧಾರವಾಡದಲ್ಲಿ ಮಹ್ಮದ್ ಕುಡುಚಿ ನಿಧಾನವಾಗಿ ತನ್ನ ಜಾಲ ವಿಸ್ತರಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಫ್ರೂಟ್ ಇರ್ಫಾನ್ ಮಗ ಅರ್ಬಾಜ್ ತನ್ನ ತಂದೆಯ ಪಾಲು ಕೇಳಿದಾಗ ಆತನ ವಿರುದ್ದ ದೂರು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು