ರಾಜ್ಯ

ಧಾರವಾಡದ ಮುರುಘಾಮಠ ಬಳಿ ಒಡೆದ ಕುಡಿಯುವ ನೀರಿನ ಪೈಪಲೈನ್ : ಬೆಳ್ಳಂ ಬೆಳಗ್ಗೆ ನೀರಿನ ರಭಸ ಕಂಡು ಬೆಚ್ಚಿ ಬಿದ್ದು, ಓಡಿಹೋದ ಜನತೆ

 

ಹೋಟೆಲ್ ಒಳಗೆ ನುಗ್ಗಿದ ನೀರು

ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿಯ ಮುರುಘಾಮಠ ಬಳಿ ಇರುವ ಸವದತ್ತಿ ರೋಡ್ ಹತ್ತಿರ ಮಲಪ್ರಭಾ ಕುಡಿಯುವ ನೀರಿನ ಪೈಪಲೈನ್ ಒಡೆದ ಘಟನೆ ಮಂಗಳವಾರ ಬೆಳ್ಳಂ ಬೆಳಗ್ಗೆ ನಡೆದಿದೆ.

ಇದರ ಪರಿಣಾಮ ಇಂದು ಬೆಳಗಿನ ಜಾವ 4 ಗಂಟೆಯಿಂದ ನೀರು ದೊಡ್ಡ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದೆ.

ನೀರಿನ ರಭಸ ಕಂಡು ಕೆಲ ಕಾಲ ದಿಕ್ಕೆ ತೋಚದೆ ಕಂಗಲಾದ ಜನತೆ ಹೌ ಹಾರಿ ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದರು.

ಅಲ್ಲದೆ ರಸ್ತೆಯಲ್ಲಿಯೇ ಇರುವ ಹೋಟೆಲ್ ಒಳಗೆ ನೀರು ನುಗ್ಗಿದೆ. ಇದರಿಂದ ಅವರು ಅಕ್ಷರಶಃ ಪರದಾಡುವಂತಾಗಿದೆ.

ಆದರೆ ಇದರ ಹೊಣೆ ಹೊರಬೇಕಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾತ್ರ ಇದಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬಂತೆ ಕೈ ಚೆಲ್ಲಿ ಕುಳಿತಿದೆ ಎಂದು ಮುರುಘಾಮಠ ಭಾಗದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ನೀರಿನ ಪೈಪ್ ಲೈನ್ ಒಡೆದ ಮಾಹಿತಿಯನ್ನು ಅರಿತ ಎಲ್ ಆಂಡ್ ಟಿ ಕಂಪನಿಯ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ನೀರಿನ ಪೈಪ್ ಲೈನ್ ದುರಸ್ತಿ ಮಾಡಲು ಹೆಣಗಾಡುತ್ತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *