ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣ ಕುರಿತು ಎಸ್ ಐ ಟಿ ಪೊಲೀಸರು ಗುರುವಾರ ಸ್ಥಳ ಮಹಜರು ನಡೆಸಿದರು.
ತನಿಖಾಧಿಕಾರಿ ಕವಿತಾ ನೇತೃತ್ವದ ತಂಡವು ಆಕೆ ವಾಸವಿದ್ದ ಆರ್ ಟಿ ನಗರದ ಪಿಜಿ ಹಾಗೂ ಎರಡು ಬಾರಿ ಬಂದು ಹೋಗಿದ್ದ ಮಲ್ಲೇಶ್ವರಂ ನ ಮಂತ್ರಿ ಗ್ರೀನ್ ಅಪಾರ್ಟ್ ಮೆಂಟ್ ಸ್ಥಳ ಮಹಜರು ಮಾಡಿ ಆಕೆಯ ಹೇಳಿಕೆಯನ್ನು ದಾಖಲಿಸಲಾಯಿತು.
ಅಲ್ಲದೆ, ಘಟನಾ ಸ್ಥಳದಲ್ಲಿದ್ದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.
ಡಿಎನ್ ಎ ಮಾದರಿ, ಕೂದಲು, ಉಗುರು, ರಕ್ತದ ಮಾದರಿ, ಸಿಸಿ ಟಿವಿ ಪೂಟೇಜ್, ಸ್ಥಳದಲ್ಲಿದ್ದ ಪರಿಚಯಸ್ಥರು, ಸೆಕ್ಯುರಿಟಿ ಗಾರ್ಡ್, ಡಿಜಿಟಲ್ ಸಾಕ್ಷ್ಯ, ಮೊಬೈಲ್ ಲೋಕೇಶನ್ ಮಾಹಿತಿ ಪಡೆದರು.
ಯುವತಿ ವಿಚಾರಣೆ ವೇಳೆ ಮಹತ್ವದ ಮಾಹಿತಿಯನ್ನು ಎಸ್ ಐ ಟಿಗೆ ಒದಗಿಸಿದ್ದಾಳೆ ಎನ್ಬಲಾಗಿದೆ.
ಅಲ್ಲದೆ, ಪೋಷಕರ ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಕಣ್ಣೀರು ಹಾಕಿದ್ದಾಳೆ ಎಂದು ತಿಳಿದುಬಂದಿದೆ.
ಜೊತೆಗೆ ಆಕೆಯ ಪೋಷಕರು ಒತ್ತಡಕ್ಕೆ ಮಣಿದು ಅವಳಿಗೆ ಬೆಂಬಲ ನೀಡುವ ಬದಲಿಗೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕೆಯ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಹೇಳಿದರು.