ಬೆಂಗಳೂರು prajakiran.com : ಹುಣಸೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ ಹಾಗೂ ಚೆನ್ನಪಟ್ಟಣದಲ್ಲಿ ಸೋಲು ಅನುಭವಿಸಿದ್ದ ಸಿ.ಪಿ. ಯೋಗೀಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಶಾಂತಾರಾಮ್ ಸಿದ್ದಿ, ತಳವಾರ ಸಾಬಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಶಿಫಾರಸ್ಸು ಮಾಡಿದ ಎಲ್ಲರ ಹೆಸರುಗಳಿಗೆ ರಾಜ್ಯಪಾಲ ವಜುಬಾಯಿ ರೂಢೂಬಾಯಿ ವಾಲಾ ಅಂತಿಮ ಮುದ್ರೆ ಒತ್ತಿದ್ದಾರೆ.
ಆ ಮೂಲಕ ಐವರು ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ಗೆಜೇಟ್ ನೋಟಿಫೀಕೇಶನ್ ಹೊರಡಿಸಲಾಗಿದೆ.
ನಿರೀಕ್ಷೆಯಂತೆ ನಟ ಸಿನಿಮಾ ರಂಗದ ಕೋಟಾದಲ್ಲಿ ಸಿ.ಪಿ. ಯೋಗೀಶ್ವರ, ಸಮಾಜಸೇವಾ ಕ್ಷೇತ್ರದಲ್ಲಿ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಶಾಂತಾರಾಮ್ ಸಿದ್ದಿ, ಇನ್ನುಳಿದಂತೆ ಭಾರತಿ ಶೆಟ್ಟಿ. ಹೆಚ್. ವಿಶ್ವನಾಥ, ತಳವಾರ ಸಾಬಣ್ಣ, ಅವರ ಹೆಸರನ್ನು ಬಿಜೆಪಿ ಸಿದ್ದ ಪಡಿಸಿದ್ದ ಪಟ್ಟಿ ಗೆ ಅಂತಿಮ ಮುದ್ರೆ ಬಿದ್ದಿದೆ.
ಕಲೆ, ಸಮಾಜ ಸೇವೆ, ವಿಶಿಷ್ಟ ಸೇವಾ ಕ್ಷೇತ್ರದ ಮೂಲಕ ಐವರ ಹೆಸರು ಶೀಫಾರಸ್ಸು ಮಾಡಲಾಗಿತ್ತು.ಅದಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಯಾವುದೇ ಅಡೆ ತಡೆ ಇಲ್ಲದೆ ಅಂಕಿತ ಹಾಕಿರುವುದು ವಿಶೇಷ.