ರಾಜ್ಯ

ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಭ್ರಷ್ಠಾಚಾರ ಆರೋಪ ಹಗಲು ರಾತ್ರಿ ಧರಣಿ

ಧಾರವಾಡ prajakiran.com : ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿ ರೈತ ಸೇನಾ ಕರ್ನಾಟಕದವತಿಯಿಂದ   ರಾಜ್ಯಾಧ್ಯಕ್ಷ ವೀರೇಶ ಸೊಬರದ ಮಠ ನೇತೃತ್ವದಲ್ಲಿ ನಿರಂತರ ಹಗಲು ರಾತ್ರಿ ಧರಣಿ ಶುಕ್ರವಾರದಿಂದ ಆರಂಭಿಸಲಾಗಿದೆ.

ನಿಗಮದ ಎಒ ಆಗಿರುವ ಕೆ ಎ ಎಸ್ ಅಧಿಕಾರಿ ಶಶಿಧರ್ ಬಗಲಿ ಈ ಭ್ರಷ್ಟಾಚಾರದ ರೂವಾರಿಯಾಗಿದ್ದಾರೆ ಎಂದು ಸೊಬರದಮಠ ಆರೋಪಿಸಿದ್ದಾರೆ.

ಧಾರವಾಡ ಹಳಿಯಾಳ ರಸ್ತೆಯ ಶ್ರೀ ನಗರ ಕ್ರಾಸ್ ಬಳಿ ಇರುವ  ಕಚೇರಿ ಎದುರು ಈ ಹೋರಾಟ ಆರಂಭಗೊಂಡಿದೆ.

ಬಗ್ಗೆ ಸಮಗ್ರ ಮಾಹಿತಿಯ ದಾಖಲೆ ಪತ್ರಗಳನ್ನು ಕೂಡಾ ಸಂಗ್ರಹಿಸಲಾಗಿದೆ. ಕರೂನಾ ಇರುವುದರಿಂದ ಯಾರಿಗೂ ಗೊತ್ತಾಗದ ಹಾಗೆ ಶೀಷ್ಠಾಚಾರ  ಉಲ್ಲಂಘನೆ ಮಾಡಿ ಭ್ರಷ್ಠಾಚಾರ ವೆಸಗಿದ್ದು ಪ್ರತ್ಯಕ್ಷವಾಗಿ ಕಂಡು ಬಂದಿದೆ ಎಂದು ದೂರಿದ್ದಾರೆ.

ಇವರ ನೇಮಕಾತಿಯೇ ಅಕ್ರಮವಾಗಿದ್ದ ಈ ಕುರಿತು ತಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ ಎಂದು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.

ಇವರನ್ನು ಕೆ ಎ ಎಸ ಹುದ್ದೆಯಿಂದ ಹಿಂಬಡ್ತಿ ನೀಡಿದ್ದು, ಕರ್ಕ್ ಆಗಿ ನೇಮಿಸಲು ಕರ್ನಾಟಕ ಸರಕಾರ ಸೂತ್ತೋಲೆ ಹೊರಡಿಸಲಾಗಿದೆ. ಆದರೂ ಪ್ರಭಾವ ಬೀರಿ, ರಾಜಕೀಯ ಒತ್ತಡ ತಂದು ರಾಜಕಾರಣಿಗಳ ಕೃಪಾರ್ಶೀವಾದ ಹಾಗೂ  ಗೂಂಡಾಗಿರಿ ಮಾಡುತ್ತಾ ನಾಲ್ಕು ವರ್ಷಗಳಿಂದ ವಂಚನೆ ಮಾಡುತ್ತಿದ್ದಾನೆ. ಈ ಹಿಂದೆ ತಹಸೀಲ್ದಾರ್ ಹುದ್ದೆ ಅಲಂಕರಿಸಿ ಸರಕಾರದ ಖಜಾನೆಗೆ ಹೊರೆ ಮಾಡಿದ್ದಾನೆ ಎಂದು ವೀರೇಶ ಸೊಬರದಮಠ ಪ್ರಜಾಕಿರಣ.ಕಾಮ್ ಎದುರು ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *