ಧಾರವಾಡ prajakiran.com : ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿ ರೈತ ಸೇನಾ ಕರ್ನಾಟಕದವತಿಯಿಂದ ರಾಜ್ಯಾಧ್ಯಕ್ಷ ವೀರೇಶ ಸೊಬರದ ಮಠ ನೇತೃತ್ವದಲ್ಲಿ ನಿರಂತರ ಹಗಲು ರಾತ್ರಿ ಧರಣಿ ಶುಕ್ರವಾರದಿಂದ ಆರಂಭಿಸಲಾಗಿದೆ.
ನಿಗಮದ ಎಒ ಆಗಿರುವ ಕೆ ಎ ಎಸ್ ಅಧಿಕಾರಿ ಶಶಿಧರ್ ಬಗಲಿ ಈ ಭ್ರಷ್ಟಾಚಾರದ ರೂವಾರಿಯಾಗಿದ್ದಾರೆ ಎಂದು ಸೊಬರದಮಠ ಆರೋಪಿಸಿದ್ದಾರೆ.
ಧಾರವಾಡ ಹಳಿಯಾಳ ರಸ್ತೆಯ ಶ್ರೀ ನಗರ ಕ್ರಾಸ್ ಬಳಿ ಇರುವ ಕಚೇರಿ ಎದುರು ಈ ಹೋರಾಟ ಆರಂಭಗೊಂಡಿದೆ.
ಈ ಬಗ್ಗೆ ಸಮಗ್ರ ಮಾಹಿತಿಯ ದಾಖಲೆ ಪತ್ರಗಳನ್ನು ಕೂಡಾ ಸಂಗ್ರಹಿಸಲಾಗಿದೆ. ಕರೂನಾ ಇರುವುದರಿಂದ ಯಾರಿಗೂ ಗೊತ್ತಾಗದ ಹಾಗೆ ಶೀಷ್ಠಾಚಾರ ಉಲ್ಲಂಘನೆ ಮಾಡಿ ಭ್ರಷ್ಠಾಚಾರ ವೆಸಗಿದ್ದು ಪ್ರತ್ಯಕ್ಷವಾಗಿ ಕಂಡು ಬಂದಿದೆ ಎಂದು ದೂರಿದ್ದಾರೆ.
ಇವರ ನೇಮಕಾತಿಯೇ ಅಕ್ರಮವಾಗಿದ್ದ ಈ ಕುರಿತು ತಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ ಎಂದು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.
ಇವರನ್ನು ಕೆ ಎ ಎಸ ಹುದ್ದೆಯಿಂದ ಹಿಂಬಡ್ತಿ ನೀಡಿದ್ದು, ಕರ್ಕ್ ಆಗಿ ನೇಮಿಸಲು ಕರ್ನಾಟಕ ಸರಕಾರ ಸೂತ್ತೋಲೆ ಹೊರಡಿಸಲಾಗಿದೆ. ಆದರೂ ಪ್ರಭಾವ ಬೀರಿ, ರಾಜಕೀಯ ಒತ್ತಡ ತಂದು ರಾಜಕಾರಣಿಗಳ ಕೃಪಾರ್ಶೀವಾದ ಹಾಗೂ ಗೂಂಡಾಗಿರಿ ಮಾಡುತ್ತಾ ನಾಲ್ಕು ವರ್ಷಗಳಿಂದ ವಂಚನೆ ಮಾಡುತ್ತಿದ್ದಾನೆ. ಈ ಹಿಂದೆ ತಹಸೀಲ್ದಾರ್ ಹುದ್ದೆ ಅಲಂಕರಿಸಿ ಸರಕಾರದ ಖಜಾನೆಗೆ ಹೊರೆ ಮಾಡಿದ್ದಾನೆ ಎಂದು ವೀರೇಶ ಸೊಬರದಮಠ ಪ್ರಜಾಕಿರಣ.ಕಾಮ್ ಎದುರು ವಿವರಿಸಿದರು.