ಧಾರವಾಡ prajakiran.com : ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿ ರೈತ ಸೇನಾ ಕರ್ನಾಟಕದವತಿಯಿಂದ ರಾಜ್ಯಾಧ್ಯಕ್ಷ ವೀರೇಶ ಸೊಬರದ ಮಠ ನೇತೃತ್ವದಲ್ಲಿ ನಿರಂತರ ಹಗಲು ರಾತ್ರಿ ಧರಣಿ ಶುಕ್ರವಾರದಿಂದ ಆರಂಭಿಸಲಾಗಿದೆ. ನಿಗಮದ ಎಒ ಆಗಿರುವ ಕೆ ಎ ಎಸ್ ಅಧಿಕಾರಿ ಶಶಿಧರ್ ಬಗಲಿ ಈ ಭ್ರಷ್ಟಾಚಾರದ ರೂವಾರಿಯಾಗಿದ್ದಾರೆ ಎಂದು ಸೊಬರದಮಠ ಆರೋಪಿಸಿದ್ದಾರೆ. ಧಾರವಾಡ ಹಳಿಯಾಳ ರಸ್ತೆಯ ಶ್ರೀ ನಗರ ಕ್ರಾಸ್ ಬಳಿ ಇರುವ ಕಚೇರಿ ಎದುರು ಈ ಹೋರಾಟ ಆರಂಭಗೊಂಡಿದೆ. […]