ಧಾರವಾಡ prajakiran.com : ಧಾರವಾಡದ ಇಬ್ಬರು ಕುಖ್ಯಾತ ಕಳ್ಳರನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಇಬ್ಬರು ಕುಖ್ಯಾತ ಕಳ್ಳರು ಧಾರವಾಡದ ಬಾಲಾಜಿ ಬಂಗಾರದ ಅಂಗಡಿ ಮೇಲ್ಛಾವಣಿ ಒಡೆದು ಅಂಗಡಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಶಹರ ಪೊಲೀಸ್ ಠಾಣೆ ಪೊಲೀಸರು ಧಾರವಾಡ ಮದಾರಮಡ್ಡಿಯ ಜಾವೀದ್ ಶಾಮೀದ್ ಅಲಿ ಡಲಾಯತ್ ಹಾಗೂ ಆಜಾದ ನಗರದ ಪ್ರಜ್ವಲ್ ತಂದೆ ಲಕ್ಷ್ಮಣ ಮಾದರ ನನ್ನು ಬಂಧಿಸಿದ್ದಾರೆ.
ಬಂಧಿತರಿಂದ 2 ಸಾವಿರ ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಧಾರವಾಡ ಶಹರ ಠಾಣೆ ಪೊಲೀಸರು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.