ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ತಾಲೂಕಿನ ಮಾರಡಗಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ.
ಮಾರಡಗಿ ಗ್ರಾಮದ ಮಟ್ಟಿ ಕೆರೆ ತುಂಬಿದ್ದರಿಂದ ಜನತಾ ಪ್ಲಾಟ್ಗಳ ಮನೆಗೆ ನೀರು ನುಗ್ಗಿದೆ. ಇಂದಿರಾಗಾಂಧಿ ಕಾಲದಲ್ಲಿ ಹಾಕಿಸಿಕೊಂಡ ಮನೆಗಳು ಇದಾಗಿದ್ದು, ಪ್ರತಿ ಭಾರಿ ದೊಡ್ಡ ಮಳೆಯಾದರೆ ಸಾಕು ಕೆರೆ ತುಂಬಿದರೆ ಪ್ರತಿ ವರ್ಷ ಇದೇ ಗೋಳು ಅನುಭವಿಸಬೇಕಾಗುತ್ತದೆ.
ಒಂದೊಂದು ಬಾರಿ ರಾತ್ರಿಯಿಡಿ ಮಳೆ ಬಂದರೆ ಜೀವ ಕೈ ಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥೀತಿ ಇದೆ.
ಈ ಬಗ್ಗೆ ಹಲವು ಬಾರಿ ಧಾರವಾಡ ಸಂಸದರ, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ರಾಜ್ಯ ರೈತ ಘಟಕದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಈ ಮಟ್ಟಿಕೆರೆ ಖಾಸಗಿ ಕೆರೆಯಾಗಿದೆ. ಹಲವು ವರ್ಷಗಳಿಂದ ಈ ಗೋಳಿನಿಂದ ಮುಕ್ತಿ ಸಿಕ್ಕಿಲ್ಲ. ಗ್ರಾಮ ಪಂಚಾಯತಿ ಮಾರಡಗಿಯವರಿಗೆ ಪ್ರತಿ ಬಾರಿ ಹೇಳಿದರೂ ಸ್ಪಂದಿಸುವ ಮಾತುಗಳನ್ನಾಡುತ್ತಾರೆ.
ಈ ಬಗ್ಗೆ ಗ್ರಾಮಸಭೆ ಯಲ್ಲಿ ಹಲವು ಬಾರಿ ಹೇಳಿದರೂ ನೋವಿಗೆ ಸ್ಪಂದಿಸಿಲ್ಲ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಈಗಲಾದರೂ ಇತ್ತಕಡೆ ಸಂಬಂಧಪಟ್ಟವರು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವರೆ ಎಂಬುದು ಕಾದು ನೋಡಬೇಕಿದೆ.