ಧಾರವಾಡ prajakiran.com : ಧಾರವಾಡ ಉಪವಿಭಾಗಾಧಿಕಾರಿಗಳಾಗಿ ಕೆಎಎಸ್ ಅಧಿಕಾರಿ ಅಶೋಕ ತೇಲಿ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ಐಎಎಸ್ ಅಧಿಕಾರಿ ಡಾ. ಗೋಪಾಲಕೃಷ್ಣ ಬಿ., ಅವರು ಅಶೋಕ ತೇಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಅಶೋಕ್ ತೇಲಿ ಅವರು ಮೂಲತಃ
ವಿಜಯಪುರ ಜಿಲ್ಲೆಯ ಬಳ್ಳೊಳ್ಳಿಯವರು.
2004ರಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ಪೂರೈಸಿ
8 ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
2014 ರ ಬ್ಯಾಚ್ ಕೆ ಎ ಎಸ್ ಅಧಿಕಾರಿಯಾಗಿದ್ದು
ಚಿಕ್ಕಬಳ್ಳಾಪುರದಲ್ಲಿ ಪ್ರೊಬೇಷನರ್ ಆಗಿ, ಜಮಖಂಡಿ ತಾಲೂಕು ಪಂಚಾಯಿತಿ ಇಒ ಆಗಿ ಬೆಳಗಾವಿ ಉಪವಿಭಾಗದ ಎಸಿ, ಎಸ್ಎಲ್ಎಒ ಎನ್ಎಚ್ ಧಾರವಾಡ ಮತ್ತು ಸವಣೂರು ಎಸಿ ಆಗಿ ಕಾರ್ಯ ನಿರ್ವಹಿಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ.