ಧಾರವಾಡ prajakiran.com : ಧಾರವಾಡ ವಿಭಾಗದ ಕಲಘಟಗಿ ವಲಯದ ಅರಣ್ಯ ಅಧಿಕಾರಿಗಳು ಅಕ್ರಮವಾಗಿ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗ ಮರ ಕಡಿದು ಸಾಗಾಟ ಮಾಡುವ ಸಮಯದಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಹನುಮಂತ ಮಲ್ಲಪ್ಪ ಓಡೋಡಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ತನಿಖೆ ಮುಂದುವರೆದಿದೆ ಎಂದು ವಲಯ ಅರಣ್ಯ ಅಧಿಕಾರಿ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಆರ್. ಜೆ. ಕಡೇಮನಿ ಅರಣ್ಯರಕ್ಷಕರಾದ ಅಮೋಘಸಿದ್ದ ಪ್ಯಾಟಿ,ಯಲ್ಲಪ್ಪ ವಡವಟ್ಟಿ, ಸುರೇಶ ಹರೋಲಿ, ಮೊನೀಶ ಲಿಂಗಶೆಟ್ಟಿ, ಅರಣ್ಯವೀಕ್ಷಕರಾದ ಬಾಳು, ನಾರಾಯಣ,ಗುರುನಾಥ, ತಬರೇಜ್, ಕರೀಪ್ಪ, ಸಚಿನ್, ವಾಹನ ಚಾಲಕ ಮಲ್ಲಿಕಾಜಾನ ಪಾಲ್ಗೊಂಡಿದ್ದರು.
ಈ ಕಾರ್ಯಾಚರಣೆಗೆ ಧಾರವಾಡ ಅರಣ್ಯ ವಿಭಾಗದ ವತಿಯಿಂದ ಕಲಘಟಗಿ ವಲಯ ತಂಡಕ್ಕೆ ಹಿರಿಯಅಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.