ಧಾರವಾಡ prajakiran.com : ಧಾರವಾಡದ ರಾಮನಗರ ಬಡಾವಣೆ ಹತ್ತಿರ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಅಧಿಕೃತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಹುಬ್ಬಳ್ಳಿ – ಧಾರವಾಡ ಘಟಕದ ಆಂತರಿಕ ಭದ್ರತಾ ವಿಭಾಗ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ.
ಬಂಧಿತ ನಾಲ್ಕು ಜನರಲ್ಲಿ ಧಾರವಾಡದ ಹೊಸಯಲ್ಲಾಪುರ ನಿವಾಸಿ ನಿಹಾಲ ವಿಠ್ಠಲ ಲಾಂಡ, ಕಲಘಟಗಿ ತಾಲೂಕಿನ ಡೊಂಬರಿಕೊಪ್ಪ ಗ್ರಾಮದ ಸುಭಾಸ ಪಿರೋಜಿ, ಧಾರವಾಡ ತಪೋವನದ ಅಭಿಷೇಕ ಹಿರೇಮಠ ಹಾಗೂ ಧಾರವಾಡ ರಾಮನಗರದ ಡೆಂಟಲ್ ಟೆಕ್ನಾಲಜಿಸ್ಟ್ ಅಭಿಷೇಕ ಉಲ್ಲಾಳ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಒಟ್ಟು 400 ಗ್ರಾಂ ಗಾಂಜಾ, ವಿವಿಧ ಕಂಪನಿಯ ನಾಲ್ಕು ಮೊಬೈಲ್, ಆಟೋ ರಿಕ್ಷಾ ಕೂಡಿಕೊಂಡು ಒಟ್ಟು 2ಲಕ್ಷ 57500 ರೂಪಾಯಿ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೂ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ಸಪೆಕ್ಟರ್ ಶ್ರೀಶೈಲ ಬ್ಯಾಕೋಡ, ಎಎಸ್ಐ ಎ.ಎ.ಮಿರ್ಜಿ, ಸಿಬ್ಬಂದಿಗಳಾದ ಶ್ರೀನಿವಾಸ ಹೊಸಮನಿ, ವ್ಹಿ.ಬಿ.ಮಾಯಣ್ಣನವರ, ಜಯದೇವಗೌಡ ಪಾಟೀಲ, ಅರುಣ ಖಾನಾಪುರ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.