ಧಾರವಾಡ prajakiran.com : ದನ ಮೇಯಿಸಲು ಹೋದ ರೈತನೊಬ್ಬ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ಕಾಳೆ (51) ಎಂಬಾತನೇ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ನಿನ್ನೆ ದನ ಮೇಯಿಸಲೆಂದು ಹೊಲಕ್ಕೆ ಹೋಗಿದ್ದ.
ಈ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು, ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ವೇಳೆಗೆ ದನಗಳು ವಾಪಸ್ ಮನೆಗೆ ಬಂದರೂ ಯಲ್ಲಪ್ಪ ಮನೆಗೆ ಬರದೇ ಇದ್ದಿದ್ದರಿಂದ ಆತನಿಗಾಗಿ ಸಂಬಂಧಿಕರು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.
ಆದ್ರೆ ಇಂದು ಬೆಳಿಗ್ಗೆ ಉಳವಪ್ಪ ಕಾನ್ನನವರ ಅವರ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ಯಲ್ಲಪ್ಪ ಶವವಾಗಿ ಪತ್ತೆಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ದೂರು ದಾಖಲಿಸಿಕೊಂಡಿದ್ದಾರೆ.