ಧಾರವಾಡ prajakiran. com : ವಿಧಾನ ಪರಿಷತ್ನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ಸಹಾಯಕ ಚುನಾವಣಾಧಿಕಾರಿ ಧಾರವಾಡ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಧಾರವಾಡದ ಕೆಸಿಡಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಅಪಾರ ಬೆಂಬಗಲಿಗರೊಂದಿಗೆ ಆಗಮಿಸಿ ಬಳಿಕ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಬದಲಾವಣೆ ಬಯಸಿದ್ದರು, ಬಹಳಷ್ಟು ಶಿಕ್ಷಕರು ಸ್ಪರ್ಧಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದರು ಹೀಗಾಗಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
ದಶಕಗಳಿಂದ ಶಿಕ್ಷಕರ ಸಮಸ್ಯೆಗಳು ಬಗೆ ಹರಿದಿಲ್ಲ. ಶಿಕ್ಷಕರ ವೇತನ ತಾರತಮ್ಯ ಇದೆ. ನಾನು ದಿನದ 24 ಗಂಟೆ ಶಿಕ್ಷಕರಿಗಾಗಿ ಇದೇನಿ. ಶಿಕ್ಷಕರು ಪಕ್ಷಾತೀತವಾಗಿ ಇದ್ದಾರೆ.
ತಮ್ಮ ಧ್ವನಿ ಯಾರು ಅಂತಾ ತಿಳಿದು ಬೆಂಬಲಿಸುತ್ತಾರೆ. ಅನೇಕ ಸಮಸ್ಯೆ ಉಳಿಯಲು ಕಾರಣ ಯಾರು ಅನ್ನೋದು ಅವರಿಗೆ ಗೊತ್ತು.
ಶಿಕ್ಷಕರ ಸಮಸ್ಯೆಗಳ ಸರಮಾಲೆಯೇ ಇದೆ. ಹೀಗಾಗಿ ಬದಲಾವಣೆ ಬಯಸಿ ನನ್ನ ಬೆಂಬಲಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಈಗಾಗಲೇ ರಾಜ್ಯದಲ್ಲಿ ಕುತೂಹಲಕ್ಕೆ ಮತ್ತು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಿನಿಧಿಸುವ ಕ್ಷೇತ್ರ ಇದಾಗಿದೆ.
ಇವರ ವಿರುದ್ಧ ಹೊರಟ್ಟಿ ಅವರ ಗರಡಿಯಲ್ಲಿ ಪಳಗಿದ ಶ್ರೀಶೈಲ ಗುಡದಿನ್ನಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬಸವರಾಜ ಗುರಿಗಾರ ಅಖಾಡಕ್ಕೆ ಇಳಿದಿರುವುದು ಹೊರಟ್ಟಿ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.