ಹುಬ್ಬಳ್ಳಿ prajakiran.com : ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡ ವಿಚಾರಣೆ ಮೂರನೇ ದಿನವೂ ಮುಂದುವರೆದಿದೆ.
ಈ ಹಿಂದೆ ಕೂಡ ಹಲವು ಸಲ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿತ್ತು. ಈಗ ಮಾಜಿ ಸಚಿವರ ಸಮ್ಮುಖದಲ್ಲಿ ಹಾಗೂ ಪ್ರತ್ಯೇಕ ವಿಚಾರಣೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಲಾಗಿದೆ.
ವಿನಯ ಕುಲಕರ್ಣಿ ಹಾಗೂ ಸೋಮಲಿಂಗ ಇಬ್ಬರನ್ನೂ ಮುಖಾಮುಖಿ ಮಾಡಿ ವಿಚಾರಣೆ ಮಾಡಿದ್ದ ಸಿಬಿಐ ಅಧಿಕಾರಿಗಳು ನ್ಯಾಮಗೌಡ ಮಾಹಿತಿ ಆಧರಿಸಿ ಅವರ ಕಾರು ಚಾಲಕ ಪುಂಡಲಿಂಗ ಮೊರಬನನ್ನು ಕರೆಸಿ ವಿಚಾರಣೆ ನಡೆಸಿದರು.
ಈ ವೇಳೆ ಆತ ಹಣದ ಬ್ಯಾಗ್ ನ್ನು ತಂದು ಕೊಟ್ಟಿದ್ದು ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಹಣ ಯಾರಿಂದ, ಯಾರಿಗೆ ತಲುಪಿದೆ.
ಆ ಹಣವನ್ನು ಯಾರಿಗೆ ಯಾರು ಮುಟ್ಟಿಸಿದರು. ಏಕೆ ಮುಟ್ಟಿಸಿದರು ಎಂಬುದರ ಕುರಿತು ಇಬ್ಬರಿಗೂ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ಮಾಡಿದರು ಎಂದು ತಿಳಿದುಬಂದಿದೆ.