ಕೊಪ್ಪಳ Prajakiran.com : ಎಮ್ಎಲ್ಸಿ ಹೆಚ್.ವಿಶ್ವನಾಥ್ ಅವರು ಪಕ್ಷದ ಶಾಸಕರಾಗಿದ್ದು, ಸಿಎಂ ಬಗ್ಗೆ ಹತಾಶೆಯಿಂದ ಆರೋಪ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಮ್ಮೆ ಪಕ್ಷಕ್ಕೆ ಬಂದು ಜನಾಭಿಪ್ರಾಯ ಪಡೆದು ನಾವು ಸಚಿವರಾಗಿದ್ದೇವೆ.
ಸೊಸೆಯಾಗಿ ಮನೆಗೆ ಮಳಿ ಹೊಡೆದುಕೊಂಡು ಬಂದ ನಂತರ ಪಕ್ಷ ನಮ್ಮದು ಎಂದುಕೊಂಡಿದ್ದೇವೆ.
ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ ಬೇರೆಯವರ ತಟ್ಟೆಯಲ್ಲಿ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಪಕ್ಷದಿಂದ ಸೂಚನೆ ಇದೆ .
ಹಾಗಾಗಿ ನಾನು ಆ ವಿಚಾರ ಮಾತನಾಡಲ್ಲ, ವಲಸಿಗ, ಮೂಲ ಶಾಸಕರ ಬಗೆಗಿನ ಹೇಳಿಕೆ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.