ವರದಿ : ಪ್ರಶಾಂತ ಹೂಗಾರ.
ಯರಗಟ್ಟಿ prajakiran.com : ಕಿಸೆ ಕಳ್ಳನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆಯೊಂದು ಸ್ಥಳೀಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶನಿವಾರ ಧಾರವಾಡದಿಂದ ಯರಗಟ್ಟಿ ಮಾರ್ಗವಾಗಿ ತೇರದಾಳಗೆ ಹೋಗುವ ಬಸ್ಸಿನಲ್ಲಿ ಜನರು ಹತ್ತಿ ಇಳಿಯುವ ವೇಳೆ ಹಲವಾರು ಜನರ ಕಿಸೆ ಕತ್ತರಿಸಿ ಸಾವಿರಾರು ಹಣವನ್ನು ದೋಚಿಕೊಂಡು ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಂತರ ಸಾರ್ವಜನಿಕರು ಈ ಕೀಸೆ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ನಂತರ ಮುರಗೋಡ ಪಿಎಸ್ಐ ಪ್ರವೀಣ ಗಂಗೋಳ್ಳಿ ಕಳ್ಳನ ವಿಚಾರಣೆ ನಡೆಸಿದರು.
ಯರಗಟ್ಟಿಯಲ್ಲಿ ಅಧಿಕ ಪ್ರಮಾಣದ ತರಕಾರಿ ಹಾಗೂ ಜಾನುವಾರಗಳ ಸಂತೆ ಜರುಗುತ್ತದೆ.
ಜಾನುವಾರಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಸುುತ್ತಮುತ್ತಲಿನ ಬಹಳಷ್ಟು ರೈತಾಪಿ ಜನರು ಬರುತ್ತಾರೆ.
ಅವರಲ್ಲಿ ಹಣ ಇರುವದನ್ನು ನೋಡಿ ಹೊಂಚು ಹಾಕಿ ಕಳ್ಳತನ ಮಾಡುತ್ತಾರೆ.
ಹಾಗೂ ಬೆಲೆ ಬಾಳುವ ಮೊಬೈಲ್, ಬೈಕಗಳನ್ನು ಕೂಡಾ ಕಳ್ಳತನ ಮಾಡುವ ಗುಂಪೊಂದು ನಗರಕ್ಕೆ ಬಂದಿದೆ.
ಆದ್ದರಿಂದ ಸಾರ್ವಜನಿಕರು ಸ್ವಲ್ಪ ಮಟ್ಟಿಗೆ ಜಾಗೃತರಾಗಿ ಇರಬೇಕೆಂದು ಮನವಿ ಮಾಡಿದರು.