ಜಿಲ್ಲೆ

ಧಾರವಾಡ ಜಿಲ್ಲಾಸ್ಪತ್ರೆಯ ಮಾನವೀಯತೆ ನೆನೆದ ಪೋಷಕರು

ಧಾರವಾಡ prajakiran.com : 21 ದಿನಗಳ ಕಾಲ ತಮ್ಮ ನವಜಾತ ಮಗುವನ್ನು ಆರೈಕೆ ಮಾಡಿದ ಧಾರವಾಡ ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕದ ದಾದಿಯರನ್ನು ತಮ್ಮ ಮಗುವಿನ ಜನ್ಮದಿನದಂದು ಪೋಷಕರು ನೆನದು ಧನ್ಯತಾಭಾವ ಮೆರೆದಿದ್ದಾರೆ.

ಧಾರವಾಡ ತಾಲೂಕಿನ ಅಮ್ಮಿನಬಾವಿಯ ಮಹಾಂತೇಶ ಎಂ ದಂಪತಿಗಳು ತಮ್ಮ ಪುತ್ರ ಗಜಾನನ ಜನ್ಮದಿನದ ಸಂಭ್ರಮದಲ್ಲಿ ಆತ ಹುಟ್ಟಿದ ಹಾಗೂ ಆರೈಕೆ ಮಾಡಿದ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಕೆ.ವಿ. ಅಚ್ಯುತ್, ಸಿಸ್ಟರ್ ಸುನೀತಾ ಪೂಜಾರ ಹಾಗೂ ರಜಿಯಾ ಬೇಗಂ, ಕೌನ್ಸಿಲರ್ ಶುಭಮಂಗಳಅವರ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿದ್ದಾರೆ.  

ಇತರ ಪೋಷಕರಿಗೂ ನವಜಾತ ಶಿಶುಘಟಕದ ವೈದ್ಯರ ದಾದಿಯರ ಸೇವೆಗೆ ಮನಪೂರ್ವಕವಾಗಿ ನಮನ ಸಲ್ಲಿಸಿದ್ದಾರೆ. ಆ ಮೂಲಕ ಧಾರವಾಡದ ಜಿಲ್ಲಾಸ್ಪತ್ರೆಯ ವಿಶ್ವಾಸರ್ಹತೆಯನ್ನು ಎತ್ತಿ ಹಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *