ಧಾರವಾಡ prajakiran.com : ಮುಂಗಾರು ಹಂಗಾಮಿನ ಬೆಳೆಹಾನಿ ಹಾಗೂ ಮಳೆಯಿಂದ ಆದ ಬೆಳೆ ಹಾನಿ ವೀಕ್ಷಣೆಗೆ ಅಧಿಕಾರಿಗಳೇ ಬರುತ್ತಿಲ್ಲ ಎಂದು ಆರೋಪಿಸಿ ರೈತರೇ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ಗಮನ ಸೆಳೇದರು.
ಈ ಕುರಿತು ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಆಗಮಿಸಿದ ಮಿಶ್ರಿಕೋಟಿ, ಉಗ್ನಿಕೇರಿ, ಚಳಮಟ್ಟಿ, ಕಾಮಧೇನು, ಕಾಡನಕೊಪ್ಪ ಹಾಗೂ ಹಾರೂಗೇರಿ ಗ್ರಾಮಗಳ ಗ್ರಾಮಸ್ಥರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ ಬೆಳೆಗೆ ತುಕ್ಕುರೋಗ ಬಾಧೆ ಕಾಣಿಸಿಕೊಂಡು ಹಾನಿಗೀಡಾಗಿದೆ ಎಂದು ದೂರಿದರು.
ರೆತರು ಔಷಧ ಸಿಂಪಡಣೆ ಮಾಡಿದರೂ ರೋಗ ಹತ್ತೋಟಿಗೆ ಬಂದಿಲ್ಲ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೃಷಿ ವಿಜ್ಞಾನಿಗಳು ಅಥವಾ ಕೃಷಿ ಇಲಾಖೆ ಸಂಬಂಧಿ ಅಧಿಕಾರಿಗಳು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ಮಳೆ ಹೆಚ್ಚಾಗಿ ಸುತ್ತಲಿನ ಗ್ರಾಮಗಳಲ್ಲಿ ಬೆಳೆಗಳ ಹಾನಿ ಹೆಚ್ಚಾಗಿದ್ದರೂ ಅದರ ಸಮೀಕ್ಷೆಗೆ ಕೂಡ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ರೈತರು ಮನವಿ ಸಲ್ಲಿಸಿದರು.
ಈ ವೇಳೆ ರೈತರಾದ ಕೇರಪ್ಪ ಚಿಕ್ಕಾಡಿ, ಚನ್ನಪ್ಪ ಉಳ್ಳಿಕಾಶಿ, ಸುರೇಶ್ ಮುದ್ದೇನವರ, ವಿಠ್ಠಲ ಬೋಸಲೆ,ಸಿದ್ದಪ್ಪ ಚಿಕ್ಕಾಡಿ,ಅಶೋಕ ಬಡಿಗೇರ ಸೇರಿದಂತೆ ಗ್ರಾಮದ ರೈತರು ಇದ್ದರು