ರಾಜ್ಯ

ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ : ಆಪ್ತಮಿತ್ರ ಸಹಾವಾಣಿಗೆ ಕರೆ ಮಾಡಿ

ಧಾರವಾಡ prajakiran.com : ಲಕ್ಷಣ ರಹಿತ ಕೋವಿಡ್ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯಲು ಅವಕಾಶವಿದೆ.

ಇಂತಹ ವ್ಯಕ್ತಿಯ ಕುಟುಂಬ ಸದಸ್ಯರುಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಳನ್ನು ಸಲಹೆ ನೀಡಿದೆ.

ಕೋವಿಡ್ ಬಗ್ಗೆ ಅನಗತ್ಯವಾಗಿ ಯಾರೊಬ್ಬರು ಭಯಪಡಬಾರದು ಹಾಗೂ ಪ್ರತ್ಯೇಕಿತ ವ್ಯಕ್ತಿಯನ್ನು ಕಳಂಕಿತರಂತೆ  ಕಾಣಬಾರದು.

ಪ್ರತ್ಯೇಕ್ಷವಾಗಿರುವ ವ್ಯಕ್ತಿಯು ಹರ್ಷಚಿತ್ತದಿಂದ ಸಂತೋಷವಾಗಿರುವಂತೆ ನೋಡಿಕೊಳ್ಳಿ ಹಾಗೂ ಅವರ  ಸ್ಥೈರ್ಯವನ್ನು ಹೆಚ್ಚಿಸಿ,  ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ.

ಯಾವಾಗಲೂ 2 ಮೀಟರ್ ಅಂದರೆ 6 ಅಡಿ ಅಂತರವನ್ನು ಕಾಪಾಡಿಕೊಳ್ಳಿ, ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖವಾಗುವರೆಗೂ ಹಾಗೂ ಕೋವಿಡ್-19 ರ ಎಲ್ಲಾ ಲಕ್ಷಣಗಳನ್ನು ಇಲ್ಲವಾಗುವರೆಗೂ ಯಾವುದೇ ಸಂದರ್ಶಕರ ಭೇಟಿಯನ್ನು ಕಡ್ಡಾಯವಾಗಿ ನಿರ್ಬಂಧಿಸಿ

ನಮ್ಮ ಹೋರಾಟವು ವ್ಯಕ್ತಿಯ ವಿರುದ್ಧವಲ್ಲ, ಸೋಂಕಿನ ವಿರುದ್ಧ ಎಂಬುದನ್ನು ನೆನಪಿಡಿ ಸಹಾಯಕ್ಕಾಗಿ  ಆಪ್ತಮಿತ್ರ ಸಹಾಯವಾಣಿ 14410 ಕರೆ ಮಾಡಲು ಆರೋಗ್ಯ ಇಲಾಖೆ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *