ಧಾರವಾಡ prajakiran.com : ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಧಾರವಾಡದ ಜನತೆ ಹೌಹಾರಿಯುತ್ತಿದ್ದಾರೆ. ಅಲ್ಲದೆ,ಅಕ್ಷರಶಃ ಬೆಚ್ಚಿ ಬೀಳುತ್ತಿದ್ದಾರೆ ಎಂದರೆ ನಂಬಲೇ ಬೇಕು.
ಇದೇನಪ್ಪ ರಸ್ತೆಯ ಮೇಲೆ ರಕ್ತವೇ? ಎಂದು ನೀವು ಪ್ರಶ್ನಿಸಿದ್ರೆ ತಪ್ಪೇನಿಲ್ಲ. ಬೆಳ್ಳಂ ಬೆಳಗ್ಗೆ ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಜನತೆ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.
ಧಾರವಾಡದ ಮಣಕಿಲ್ಲಾ ಪ್ರದೇಶದಲ್ಲಿರುವ ಕಸಾಯಿಖಾನೆಯಿಂದ ದನಗಳಗಳ ರಕ್ತ ನೀರಿನಲ್ಲಿ ಮಿಶ್ರಣವಾಗಿ ಆ ನೀರು ಓವರ್ ಫ್ಲೋ ಆಗಿ ರಸ್ತೆಯ ಮೇಲೆ ಹರಿಯುತ್ತಿತ್ತು.
ಡ್ರೈನೇಜ್ ಸಮಸ್ಯೆಯಿಂದಾಗಿ ಕಸಾಯಿಖಾನೆಯಿಂದ ಬಂದ ದನಗಳ ರಕ್ತ ಆ ನೀರಿನಲ್ಲಿ ಮಿಶ್ರಣ ಆಗಿತ್ತು. ನಡು ರಸ್ತೆಯಲ್ಲಿನ ಮ್ಯಾನ್ ಹೋಲ್ ನಿಂದ ಓವರ್ ಫ್ಲೋ ಆದ ರಕ್ತ ಮಿಶ್ರಿತ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು.
ಈ ರಕ್ತ ಮಿಶ್ರಿತ ನೀರು ಕೆಲ ಮನೆಗಳಿಗೂ ನುಗ್ಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪಾಲಿಕೆ ಸಿಬ್ಬಂದಿ ಆ ಡ್ರೈನೇಜ್ ಸಮಸ್ಯೆಯನ್ನು ಬಗೆಹರಿಸಿದರು.
ಆದರೆ ಗೋಮಾತೆಯ ಮಾರಣ ಹೋಮ ಎಗ್ಗಿಲ್ಲದೆ ನಡೆಯುತ್ತಿದ್ದರೂ ಮಹಾನಗರ ಪಾಲಿಕೆಯಾಗಲಿ ಪೊಲೀಸ್ ಇಲಾಖೆಯಾಗಲಿ ಕ್ಯಾರೆ ಎನ್ನದಿರುವುದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗೋ ಮಾತೆಯನ್ನು ಈಗಲಾದರೂ ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.