ನವಲಗುಂದ peaks. com : ಧಾರವಾಡ ಜಿಲ್ಲೆಯ ಬಂಡಾಯದ ನೆಲ ನವಲಗುಂದ ತಾಲೂಕಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸೋಮವಾರ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ವಿಜಯಸಾಕ್ಷಿ ಪತ್ರಿಕೆಯ ಕ್ರೀಯಾಶಿಲ ಹಾಗೂ ಹಿರಿಯ ಪತ್ರಕರ್ತ ಚರಂತಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವವಾಣಿ ಪತ್ರಿಕೆಯ ಯಲ್ಲಪ್ಪ ಭೊವಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಮಹಾಮಂಡಳ ನ್ಯೂಸ್ ಸಂಪಾದಕ ಡಾ.ಅಬ್ದುಲ್ ರಜಾಕ ನದಾಫ, ಪಬ್ಲಿಕ್ ನೆಕ್ಸ್ಟಚಾನಲ್ ನ ವಿನೋದ ಇಚ್ಚಂಗಿ, ಪ್ರಜಾವಾಣಿ ಪತ್ರಿಕೆಯ ಮೆಹಬೂಬಸಾಬ ಅಣ್ಣಿಗೇರಿ, ಉದಯಕಾಲ ಪತ್ರಿಕೆಯ ಚಂದ್ರಶೇಖರ ಕೊಟಗಿ, ನ್ಯೂಸ್ 43 ವರದಿಗಾರ ಶಿವು ನಾಯಕ, ಆಯ್ಕೆಯಾಗಿದ್ದಾರೆ.
ಇಲ್ಲಿಯ ಲೋಕೊಪಯೋಗಿ ಇಲಾಖೆಯ ಅತಿಥಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸರ್ವಾನುಮತದಿಂದ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ಪತ್ರಕರ್ತರು ಪ್ರಾಮಾಣಿಕವಾಗಿ ಜನರ ಧ್ವನಿಯಾಗಿ ಸೇವೆ ಸಲ್ಲಿಸಿ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಾಲ್ಲೂಕು ಹಾಗು ಹೋಬಳಿ ಮಟ್ಟದ ವರದಿಗಾರರಿಗೂ ಒದಗಿಸಿಕೊಡುವ ಜವಾಬ್ದಾರಿ ನನ್ನದಾಗಿದೆ ಎಂದು ಭರವಸೆ ನೀಡಿ ಎಲ್ಲರಿಗೂ ಶುಭ ಹಾರೈಸಿದರು.
ಜಿಲ್ಲೆಯ ಸಂಘಟನೆ ಬಂಡಾಯದ ನೆಲ ನವಲಗುಂದ ನಿಂದ ಆರಂಭಗೊಂಡಿದ್ದು, ಜಿಲ್ಲೆಯ ಪತ್ರಕರ್ತರಿಗೆ ಮಿಂಚಿನ ಸಂಚಲನಉಂಟು ಮಾಡಿದೆ
ಈಗಾಗಲೇ ಧಾರವಾಡ ಜಿಲ್ಲೆಯ ಪ್ರವಾಸದಲ್ಲಿರುವ ಬಂಗ್ಲೆ ಮಲ್ಲಿಕಾರ್ಜುನ ಶೀಘ್ರದಲ್ಲಿಯೇ ಧಾರವಾಡ ಜಿಲ್ಲೆಯ ಪದಾಧಿಕಾರಿಗಳ ನೇಮಕ ಮಾಡಲಿದ್ದಾರೆ ಎಂದು ತಿಳಿಸಿದರು.