ಜಿಲ್ಲೆ

ಧಾರವಾಡದಲ್ಲಿ ರಕ್ತದ ಕೊರತೆ ನೀಗಿಸಲು ಆಮ್ ಆದ್ಮಿ ರಕ್ತದಾನ

ಧಾರವಾಡ prajakiran.com : ಕರೋನಾ ಮಹಾಮಾರಿಯ ಅವಧಿಯಲ್ಲಿ ದೀರ್ಘಕಾಲ ಲಾಕ್ ಡೌನ್ ಹಾಗೂ ಇತರ ನಿರ್ಬಂಧಗಳ ಕಾರಣ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಉಂಟಾಗಿರುವ ರಕ್ತದ ಕೊರತೆಯನ್ನು ನಿವಾರಿಸುವ ದೃಷ್ಟಿಯಿಂದ ಆಮ್ ಆದ್ಮಿ ಪಕ್ಷವು ಜೂಲೈ ತಿಂಗಳಲ್ಲೇ ರಕ್ತದಾನ ಅಭಿಯಾನವನ್ನು ಅರಂಭಿಸಿದೆ.

ಮೊದಲನೆಯ ಹಂತದಲ್ಲಿ, ಹುಬ್ಬಳ್ಳಿಯಲ್ಲಿ ರಕ್ತದಾನ ಶಿಬಿರ ಮತ್ತು ಪ್ಲಾಸ್ಮಾ ಕಣಗಳ ದಾನ ಯಶಸ್ವಿಯಾಗಿ ಆಯೋಜಿಸಲಾಗಿದೆ.

ಅಭಿಯಾನದ ಅಂಗವಾಗಿ, ಧಾರವಾಡದ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವದಿಂದ, ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದೆ.

ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನೆರವಿಗಾಗಿ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಸಂಸ್ಥೆ ಯ ಆವರಣದಲ್ಲಿ ಭಾನುವಾರ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು. 

ಮಧ್ಯಾಹ್ನ 2 ಗಂಟೆ ವರೆಗೆ ರಕ್ತದಾನ ಶಿಬಿರ ನಡೆದಿದ್ದು, ಅನೇಕ ಎಎಪಿ ಕಾರ್ಯಕರ್ತರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ಜನಸಾಮಾನ್ಯರು ರಕ್ತ ದಾನ ಮಾಡಿದರು.

ಈ ಸಂದರ್ಭದಲ್ಲಿ  ವಿನಯ ನಾಡಗೀರ,  ,  ಡಾ. ಪ್ರಭು ಸಗ್ಗಮ,  ಸಂತೋಷ ನರಗುಂದ,      ರಮೇಶ ಜಮಾದಾರ,   ನಾಗರಾಜ ಕರೆಣ್ಣವರ,  ಅನಂತಕುಮಾರ ಭಾರತೀಯ,   ಶರೀಫಸಾಬ  ಮಡಕೇಶ್ವರ ಮತ್ತಿತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *