ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ.
ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಗೂ ಕೋವಿಡ್ ಯೇತರ ರೋಗಿಗಳಿಗೆ ಬೆಡ್ ಗಳೇ ಸಿಗುತ್ತಿಲ್ಲ.
ತಮ್ಮ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಮಕ್ಕಳು ಪರದಾಡುತ್ತಿದ್ದರೆ, ಮಕ್ಕಳನ್ನು, ಸಂಬಂಧಿಕರನ್ನು ಉಳಿಸಿಕೊಳ್ಳಲು ಪೋಷಕರು ಹಾಗೂ ಕುಟುಂಬಸ್ಥರು ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಅಮ್ಮನ ಉಳಿಸಿಕೊಳ್ಳಲು ಮಗನ ಪರದಾಟ ಒಂದೆಡೆಯಾದರೆ, ತಂದೆಯನ್ನು ಉಳಿಸಿಕೊಳ್ಳಲು ಇಬ್ಬರು ಪುತ್ರರ ಹೆಣಗಾಟ ಬೆಂಗಳೂರಿನಲ್ಲಿ ಕಂಡು ಬಂದಿದೆ.
ಮೂರು ನಾಲ್ಕು ಆಸ್ಪತ್ರೆ ಅಲೆದಾಟ ನಡೆಸಿದ ನಂತರ ತಂದೆಯನ್ನು ಉಳಿಸಿಕೊಳ್ಳಲು ಮಗ ಕೊನೆಗೂ ಯಶಸ್ವಿಯಾಗಿದ್ದಾನೆ. ಮಗನ ಪರದಾಟ ನೋಡಿದರೆ ಕಣ್ಣೀರು ಬರುವಂತೆ ಇದೆ.
ಆಸ್ಪತ್ರೆಗಳಿಗೆ ಪೋನ್ ಮಾಡಿದರೆ ಬನ್ನಿ ಅಂತಾರೆ, ಅಲ್ಲಿಗೆ ಹೋದ ಮೇಲೆ ನೀವು ಬೇರೆ ಕಡೆ ಕರೆದುಕೊಂಡಿ ಬೇರೆ ಆಸ್ಪತ್ರೆಗೆ ಹೋಗಿ ಅಂತಾರೆ ಎಂದು ಗೋಳು ತೋಡಿಕೊಂಡರು.
ನಮ್ಮ ಸರಕಾರ ಹೇಗೆ ನಿರ್ವಹಣೆ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಎರಡು ಗಂಟೆ ಸುಮ್ಮನೇ ಕುಳಿತಿದ್ದಿವಿ. ತುರ್ತು ನಿಗಾ ಘಟಕದಲ್ಲೂ ಡಾಕ್ಟರ್ ಇಲ್ಲ.
ಸುಮ್ಮನೇ ನಾಲ್ಕು ಗಂಟೆ ಕುಡಿಸಿಕೊಂಡಿದ್ದಾರೆ. ಕಾಲು ಬಿದ್ದು ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದೇವೆ ಎಂದು ಕಣ್ಣೀರು ಸುರಿಸಿದರು.
ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ಸರಕಾರದ ಮಾರ್ಗದರ್ಶಿ ಪ್ರಕಾರ ನೆಪ ಕೋವಿಡ್ ತಪಾಸಣೆ ಕಡ್ಡಾಯ ನೆಪ ಹೇಳುತ್ತಿದ್ದಾರೆ. ಯಾರು ಕೂಡ ದಾಖಲಾತಿ ಮಾಡುತ್ತಿಲ್ಲ ಎಂದು ಇಬ್ಬರು ಮಕ್ಕಳು ದೂರಿದ್ದಾರೆ.
ನಿನ್ನೇ ಇಡೀ ದಿವಸ ಅಲೆದಾಡಿದ್ದೇವೆ ಎಂದು ಗಿರೀಶ್ ತಮ್ಮ ಕುಟುಂಬದ ಕರುಣಾಜನಕ ಕಥೆ ವಿವರಿಸಿದರು.
ತೀವ್ರ ಉಸಿರಾಟದಿಂದ ಬಳಲುತ್ತಿದ್ದ 69 ವರ್ಷದ ತಂದೆಯನ್ನು ಕೋವಿಡ್ ಟೆಸ್ಟ್ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಪೋರ್ಟಿಸ್ ಆಸ್ಪತ್ರೆಯವರು ಫೀವರ್ ಕ್ಲೀನಿಕ್ ಗೆ ಹೋಗಿ ಅಂತ ಸಾಗಹಾಕಿದರು. ಕೊನೆಗೆ ಸ್ಪರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಹೇಳಿದರು.