ರಾಜ್ಯ

ಸಲೂನ್ ಅಂಗಡಿಗೆ ಹೋಗಿದ್ದ ಇಬ್ಬರಿಗೆ ಕರೋನಾ ಸೋಂಕು ಪತ್ತೆ

ಕೋಲಾರ / ಬೆಂಗಳೂರು prajakiran.com : ಸಲೂನ್ ಅಂಗಡಿಗೆ ಹೋಗಿದ್ದ ಇಬ್ಬರಿಗೆ ಮಹಾಮಾರಿ ಕರೋನಾ ಸೋಂಕು ಪತ್ತೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

 ಇದರಿಂದಾಗಿ ಬೆಂಗಳೂರು ಹಾಗೂ ಕೋಲಾರ ಜಿಲ್ಲೆಯಲ್ಲಿ ಕೆಲ ಕಾಲ ಆತಂಕ ಮನೆ ಮಾಡಿದ್ದು, ಸಲೂನ್ ಅಂಗಡಿಗೆ ಬಂದು ಹೋದವರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹರಸಾಹಸ ಮಾಡಬೇಕಾಯಿತು. 

ಕೋಲಾರ ಜಿಲ್ಲೆಯ ಬಂಗಾರಪೇಟೆ ಸುಪರ್ ಜೆಂಟ್ಸ್ ಸೆಲೂನ್ ಗೆ ಹೋಗಿ ಬಂದಿದ್ದ ಟೆಕ್ಕಿಯಿಂದಾಗಿ ಈ ಭಯವುಂಟಾಗಿದೆ.

ಮಲೇಷಿಯಾದಿಂದ ಬಂದಿದ್ದ ಅನಿವಾಸಿ ಭಾರತೀಯನನ್ನು ಮೇ 22ರಂದು ಗಂಟಲು ತಪಾಸಣೆ ಮಾಡಲಾಗಿತ್ತು. ಆತನ ಗಂಟಲು ತಪಾಸಣೆ ವರದಿ ಬರುವ ಮುನ್ನವೇ ಆತ ಊರಿಗೆ ಹೋಗಿದ್ದ.

ಇಂದು ಆತನ ವರದಿ ಬಂದಿದ್ದು ಪಾಸಿಟಿವ್ ಇರುವುದು ಗೊತ್ತಾಗಿದೆ.

ಈ ಟೆಕ್ಕಿ ಊರಿಗೆ ಬಂದ ನಂತರ ಹೋಮ್ ಕ್ವಾರಂಟಿನ್ ಆಗದೆ, ಕೋಲಾರದ ಬಂಗಾರಪೇಟೆಯಲ್ಲಿರುವ ಸೂಪರ್ ಜೆಂಟ್ಸ್ ಸೆಲೂನ್ ಹೋಗಿದ್ದ.

ಇದರಿಂದಾಗಿ ಗಲಿಬಿಲಿಗೊಂಡ ಪುರಸಭೆಅಧಿಕಾರಿಗಳು ಡಂಗೂರ ಸಾರಿ ಜನರಿಗೆ ಅರಿವು ಮೂಡಿಸಿದರು. ಅಲ್ಲದೆ, ಸಲೂನ್ ಮಾಲೀಕರ ವಿಚಾರಣೆ ಮಾಡಿ ಅವರ ಬಳಿ ಮಾಹಿತಿ ಪಡೆದು 11 ಜನರ ಕ್ವಾರಂಟಿನ್ ಮಾಡಲಾಗಿದೆ.

ಅಲ್ಲದೆ, ಬಂಗಾರಪೇಟೆಯ ವಿವೇಕಾನಂದ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಈವರೆಗೆ 8 ಜನ ಸ್ವಯಂ ಪ್ರೇರಿತರಾಗಿ ಕ್ವಾರಂಟಿನ್ ಆಗಿದ್ದಾರೆ ಎಂದು ಪುರಸಭೆ ಸದಸ್ಯ ಸುನೀಲಕುಮಾರ್ ತಿಳಿಸಿದರು.

ಅದೇ ರೀತಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸೋಂಕಿತನೊಬ್ಬ ಕಟಿಂಗ್ ಮಾಡಿಸಿಕೊಂಡಿದ್ದ. ಆತನಿಗೂ ಇಂದು ಸೋಂಕು ದೃಢವಾಗಿದೆ. ಹೀಗಾಗಿ ಸಲೂನ್ ಮಾಲೀಕನನ್ನ ಕ್ವಾರಂಟಿನ್ ಮಾಡಲಾಗಿದೆ.

ಇದರಿಂದಾಗಿ ಕೋಲಾರದಲ್ಲಿ ಪಿಪಿಇ ಕಿಟ್ ಧರಿಸಿ ಸಲೂನ್ ಮಾಡಿ ಯುವಕನೊಬ್ಬ ಗಮನ ಸೆಳೆದಿದ್ದಾರೆ.

ಸೋಂಕಿತರಿಬ್ಬರು ಸಲೂನ್ ಮಾಲೀಕರಿಗೂ ಕಂಟಕ ತಂದ ಪರಿಣಾಮ ರಾಜ್ಯದಲ್ಲಡೆ ಕ್ಷೌರಿಕ ಸಮುದಾಯದ ಬಾಂಧವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *